ಕನ್ನಡ ಭಾಷಿಗರನ್ನೇ ಕರ್ನಾಟಕದ ಬ್ಯಾಂಕ್ಗಳಿಗೆ ನೇಮಿಸಿ. ಎಸ್'ಎಸ್'ಎಲ್ಸಿವರೆಗೆ ಕನ್ನಡ ಓದದವರನ್ನು ಅನರ್ಹಗೊಳಿಸಿ.
ಬೆಂಗಳೂರು(ಸೆ.11): ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕನ್ನಡ ಭಾಷಿಗರನ್ನೇ ಕರ್ನಾಟಕದ ಬ್ಯಾಂಕ್ಗಳಿಗೆ ನೇಮಿಸಿ. ಎಸ್'ಎಸ್'ಎಲ್ಸಿವರೆಗೆ ಕನ್ನಡ ಓದದವರನ್ನು ಅನರ್ಹಗೊಳಿಸಿ. ರಾಜ್ಯದ ಬ್ಯಾಂಕಿಂಗ್ ಹುದ್ದೆಗೆ ಪರೀಕ್ಷೆ ಬರೆಯಲು ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ. ಅಬಕಾರಿ, ರೈಲ್ವೆ ಇಲಾಖೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಎಂದು ಆಗ್ರಹಿಸಿದ ಅವರು ಪ್ರಾದೇಶಿಕ ಭಾಷಿಕರಿಗೆ ಆದ್ಯತೆ ನೀಡುವ ಕಾನೂನು ರಚಿಸುವಂತೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 9ರಂದು ಬ್ಯಾಂಕಿಂಗ್ ಪರೀಕ್ಷೆ ನಿಯಮ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು.
