ನೆರವಿಗೆ ಬನ್ನಿ: ಸಿಎಂ ಮನವಿಗೆ ಏನಂದ್ರು ಪಿಎಂ?
ಪ್ರಧಾನಿ ಮೋದಿ ಭೇಟಿಯಾದ ಸಿಎಂ ಕುಮಾರಸ್ವಾಮಿ| ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿರುವ ಸಿಎಂ| ರಾಜ್ಯದ ಬರ ಪರಿಸ್ಥಿತಿ ನಿಭಾಯಿಸಲು ನೆರವಿಗೆ ಮನವಿ| ನರೇಗಾ ಯೋಜನೆಯ ಹಣ ಬಿಡುಗಡೆಗೆ ಸಿಎಂ ಆಗ್ರಹ| ಪ್ರಧಾನಿ ಮೋದಿ ಅಭಿನಂದಿಸಿದ ಸಿಎಂ ಕುಮಾರಸ್ವಾಮಿ|
ನವದೆಹಲಿ(ಜೂ.15): ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿದ್ದು, ನೆರವಿಗೆ ಧಾವಿಸುವಂತೆ ಸಿಎಂ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.
"
ನವದೆಹಲಿಯಲ್ಲಿ ಇಂದು ನಡೆಯಲಿರುವ ನೀತಿ ಆಯೋಗದ ಸಭೆಗೂ ಮುನ್ನ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕುಮಾರಸ್ವಾಮಿ, ರಾಜ್ಯ ಶೇ.45ರಷ್ಟು ಮಳೆಯ ಕೊರತೆ ಎದುರಿಸುತ್ತಿದ್ದು ಬರ ಪರಿಹಾರ ಘೋಷಣೆಗೆ ಮನವಿ ಮಾಡಿದರು.
ಇದೇ ವೇಳೆ ನರೇಗಾ ಯೋಜನೆಯ 1,500 ಕೋಟಿ ಬಾಕಿ ಹಣ ಬಿಡುಗಡೆಗೂ ಆಗ್ರಹಿಸಿದ ಸಿಎಂ, ಸಾಲಮನ್ನಾ ಯಶಸ್ವಿ ಅನುಷ್ಠಾನದ ಕುರಿತು ಪ್ರಧಾನಿ ಅವರೊಂದಿಗೆ ಚರ್ಚೆ ನಡೆಸಿದರು.
Delhi: Chief Minister of Karnataka H.D. Kumaraswamy met Prime Minister Narendra Modi and congratulated him for being re-elected as Prime Minister. pic.twitter.com/98E8a2TAUQ
— ANI (@ANI) June 15, 2019
ನರೇಂದ್ರ ಮೋದಿ ಅವರನ್ನು ಅವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ಮಾಡಿದ ಕುಮಾರಸ್ವಾಮಿ, ಪ್ರಧಾನಿಯವರಿಗೆ ಶಾಲು ಹೊದಿಸಿ ಅಭಿನಂದಿಸಿದರು.