ಭಾರೀ ವಂಚನೆ : ಬ್ಯಾಂಕ್ ಶಾಖೆ ಮುಚ್ಚಲು ನಿರ್ಧಾರ
ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಕ್ಕೆ ನಡೆದ ಹಿನ್ನೆಲೆಯಲ್ಲಿ ಈ ಬ್ಯಾಂಕ್ ಗೆ ಕೆಟ್ಟ ಹೆಸರು ಬಂದ ಹಿನ್ನೆಲೆಯಲ್ಲಿ ಇದರ ಶಾಖೆಯೊಂದನ್ನು ಮುಚ್ಚಲು ನಿರ್ಧಾರ ಮಾಡಲಾಗಿದೆ.
ಮುಂಬೈ: ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಕ್ಕೆ ಸಾಕ್ಷಿಯಾದ ಮುಂಬೈನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬ್ರಾಡಿ ಹೌಸ್ ಶಾಖೆಯನ್ನು ಮುಚ್ಚಲು ನಿರ್ಧರಿಸಲಾಗಿದೆ.
ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬ ಸದಸ್ಯರು 13000 ಕೋಟಿ ರು. ವಂಚನೆ ನಡೆಸಿದ್ದು ಇದೇ ಶಾಖೆಯಲ್ಲಿ. ಈ ಶಾಖೆಯಿಂದಾಗಿ ಇಡೀ ಬ್ಯಾಂಕಿಗೆ ಕೆಟ್ಟಹೆಸರು ಬಂದ ಕಾರಣ ಅದನ್ನು ಮುಚ್ಚಲು ನಿರ್ಧರಿಸಲಾಗಿದೆ.
ಈ ಶಾಖೆಯಲ್ಲಿದ್ದ ಎಲ್ಲಾ ಗ್ರಾಹಕರ ಖಾತೆಗಳನ್ನು ಬ್ಯಾಂಕಿನ ಇನ್ನೊಂದು ಶಾಖೆಗೆ ವರ್ಗಾಯಿಸಲಾಗುವುದು.