ಮಂಗಳೂರು (ಸೆ. 18): ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆರೋಪಿಗಳನ್ನು ಬದುಕಿಸಲು ಸಿಐಡಿ ತನಿಖೆ ನಡೆಸಲಾಗಿದೆ. ಹೀಗಾಗಿ ಗಣಪತಿ ಮರಣಪೂರ್ವ ಹೇಳಿಕೆ ಪರಿಗಣಿಸಿ, ಸುಪ್ರೀಂಕೋರ್ಟ್​ ಮೂಲಕ ತನಿಖೆ ನಡೆಯಬೇಕಿದೆ ಎಂದು ಪೂಜಾರಿ ಹೇಳಿದ್ದಾರೆ.

ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್​ಗೆ ಕ್ಲೀನ್​ಚಿಟ್​​ ಸಿಕ್ಕಿದೆ, ಇನ್ನು ಜಾರ್ಜ್‌ ಮತ್ತೆ ಸಂಪುಟಕ್ಕೆ ಸೇರಿದರೆ ಕಾಂಗ್ರೆಸ್ ಕಥೆ ಮುಗಿಯಿತು, ಎಂದು ಪೂಜಾರಿ ಹೇಳಿದ್ದಾರೆ.