ಪಿಎಸ್‌'ಐ ಗವಿರಾಜು ಸಾರ್ವಜನಿಕರು ಮತ್ತು ಕಾರ್ ಮಾಲೀಕರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ.

ಚಿಕ್ಕಮಗಳೂರು(ಫೆ. 28): ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಪಿಎಸ್‌'ಐಗೆ ಸಾರ್ವಜನಿಕರೇ ಥಳಿಸಿರುವ ಘಟನೆ ಸಂಭವಿಸಿದೆ. ಇಲ್ಲಿಯ ಮೂಡಿಗೆರೆ ತಾಲೂಕಿನ ಮುಕ್ತಿಹಳ್ಳಿ ಗ್ರಾಮದ ಬಳಿ ಪಿಎಸ್‍ಐ ಗವಿರಾಜು ಅವರಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿಹೊಡೆದಿದೆ. ಈ ವೇಳೆ ಕಾರಿನ ಮಾಲೀಕ ಮತ್ತು ಪಿಎಸ್‌ಐ ಗವಿರಾಜು ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತರಾದ ಪಿಎಸ್‌'ಐ ಗವಿರಾಜು ಸಾರ್ವಜನಿಕರು ಮತ್ತು ಕಾರ್ ಮಾಲೀಕರಿಗೆ ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಪಿಎಸ್‌'ಐ ಗವಿರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

Add Asianetnews Kannada as a Preferred SourcegooglePreferred