ಕರ್ನಾಟಕದ ಕೊಡಗಿನಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಕುಟುಂಬದ ಕಾಫಿ ಎಸ್ಟೇಟ್‌ನಿಂದ 2008-09ನೇ ಹಣಕಾಸು ವರ್ಷ ದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಹಣ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

ಚೆನ್ನೈ: ಕರ್ನಾಟಕದ ಕೊಡಗಿನಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಮತ್ತು ಅವರ ಕುಟುಂಬದ ಕಾಫಿ ಎಸ್ಟೇಟ್‌ನಿಂದ 2008-09ನೇ ಹಣಕಾಸು ವರ್ಷ ದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ಹಣ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೀಡಿದ್ದ ಆದೇಶವನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಫಿ ಬೀಜ ಮತ್ತು ಮೆಣಸಿನಕಾಳು ಮಾರಾಟದಿಂದ ಬಂದ ಆದಾಯಕ್ಕೆ 6 ಲಕ್ಷ ರು. ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ನೋಟಿಸ್ ನೀಡಿತ್ತು. ಆದರೆ ನಾವು ಕಾಫಿಬೀಜ ಸಂಸ್ಕರಿಸಿಲ್ಲ. ಕಾಫಿ ಬೀಜವನ್ನು ಹಸಿಯಾಗಿ ಮಾರಿದ್ದೇವೆ. ಇದು ತೆರಿಗೆ ವ್ಯಾಪ್ತಿಗೆ ಬರದು ಎಂದು ಚಿದು ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್ ಒಪ್ಪಿದೆ