ಅಂಬಿಡೆಂಟ್ ಹಗರಣದ ಬಗ್ಗೆ ಜನಾರ್ದನ ರೆಡ್ಡಿ ಬಾಯ್ಬಿಟ್ಟ ಸತ್ಯ..!
ಅಂಬಿಡೆಂಟ್ ಹಗರದಣದ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಅವರನ್ನ ಕಳೆದ ಮೂರು ಗಂಟೆಗಳ ವರೆಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ 57 ಕೆ.ಜಿ ಚಿನ್ನದ ಬಗ್ಗೆ ರೆಡ್ಡಿ ಕೊಟ್ಟ ಉತ್ತರವೇನು? ಅಂಬಿಡೆಂಟ್ ಹಗರಣದ ಬಗ್ಗೆ ಜನಾರ್ದನ ರೆಡ್ಡಿ ಏನಂದ್ರು? ಇಲ್ಲಿ ಸಂಪೂರ್ಣ ಮಾಹಿತಿ.
ಬೆಂಗಳೂರು, [ನ.10]: ಅಂಬಿಡೆಂಟ್ ಹಗರಣದ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನ ತೀವ್ರ ವಿಚಾರಣೆ ಒಳಪಡಿಸಲಾಗಿದೆ.
ಖುದ್ದು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ನೇತ್ರತ್ವದಲ್ಲಿ ಸತತ ಮೂರು ಗಂಟೆಗಳ ಜನಾರ್ದನ ರೆಡ್ಡಿ ಅವರನ್ನ ವಿಚಾರಣೆ ನಡೆಸಿದ್ದಾರೆ.
ಪೊಲೀಸರನ್ನ ಆಟವಾಡಿಸಿದ್ದ ಚಾಲಾಕಿ ಜನಾರ್ದನ ರೆಡ್ಡಿ ಇಷ್ಟು ದಿನ ಅಡಗಿದ್ದೆಲ್ಲಿ ಗೊತ್ತಾ?
ಅಂಬಿಡೆಂಟ್ ಹಗರಣದ ಬಗ್ಗೆ ಸಿಸಿಬಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೆಡ್ಡಿ, ತಿರುಪತಿ ತಿಮ್ಮಪ್ಪನ ಆಣೆಗೂ ನನಗೂ ಈ ಡೀಲ್ ಗೂ ಸಂಬಂಧ ಇಲ್ಲ ಎಂದು ದೇವರ ಮೇಲೆ ರೆಡ್ಡಿ ಆಣೆ ಮಾಡಿದರು.
"
ವಿನಾಕಾರಣ ಈ ಪ್ರಕರಣದಲ್ಲೀಗ ನನ್ನನ್ನು ಸಿಲುಕಿಸಲಾಗಿದೆ. ಆಂಬಿಡೆಂಟ್ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲವೆಂದ ಎಂದು ಜನಾರ್ದನ ರೆಡ್ಡಿ ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು.
ಆಂಬಿಡೆಂಟ್ & ರೆಡ್ಡಿ: ಸುವರ್ಣನ್ಯೂಸ್ನಿಂದ Super Exclusive ವರದಿಗಳ ಸರಮಾಲೆ
57 ಕೆ.ಜಿ ಚಿನ್ನದ ಬಗ್ಗೆ ಉತ್ತರ ಕೊಟ್ಟ ರೆಡ್ಡಿ
ಇನ್ನು ಬಹುಮುಖ್ಯವಾಗಿ 57 ಕೆ.ಜಿ ಚಿನ್ನದ ಬಗ್ಗೆ ಉತ್ತರ ನೀಡಿದ ರೆಡ್ಡಿ, ನನ್ನ ಹತ್ತಿರ ಯಾವುದೇ ಚಿನ್ನದ ಬಿಸ್ಕೆಟ್ ಗಳು ಇಲ್ಲ. ನನ್ನ ಬಳಿ ಇರುವ ಚಿನ್ನಕ್ಕೆ ನನ್ನ ಬಳಿ ಸೂಕ್ತ ಬಿಲ್ ಇದೆ.
ಬೇಕಾದ್ರೆ ಬಿಲ್ ಚೆಕ್ ಮಾಡ್ಕೊಳ್ಳಿ. ನಾನು ಫರೀದ್ ಮೂಲಕ ಚಿನ್ನವನ್ನೇ ಪಡೆದುಕೊಂಡಿಲ್ಲ ಎಂದಿರುವ ರೆಡ್ಡಿ ಫರೀದ್, ರಮೇಶ್ ಕೊಠಾರಿ ನನಗೆ ಹೆಚ್ಚು ಗೊತ್ತಿಲ್ಲವೆಂದು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.