“ಜೈಲುಶಿಕ್ಷೆ ಅನುಭವಿಸುವುದೂ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಡಿ.30ರೊಲಗೆ ನೋಟು ಬದಲಾವಣೆ ಮಾಡದವರಿಗೆ ಈಗ ಅವಕಾಶ ನಿರಾಕರಿಸುವುದು ನಿಜಕ್ಕೂ ಗಂಭೀರ ವಿಷಯ ಎಂದು ಮುಖ್ಯನ್ಯಾಯಮುರ್ತಿಗಳು ಹೇಳಿದರು.

ನವದೆಹಲಿ(ಜುಲೈ 04): ಅನಿವಾರ್ಯ ಕಾರಣಗಳಿಂದ ನಿಷೇಧಿತ 500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ಹಕ್ಕನ್ನು ಸರಕಾರ ನಿರಾಕರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಇಂದು ವಿಚಾರಣೆಯ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಜೆಎಸ್ ಖೆಹಾರ್ ಅವರು, ಹಳೆಯ ನೋಟುಗಳ ಎಕ್ಸ್’ಚೇಂಜ್’ಗೆ ಏನು ವ್ಯವಸ್ಥೆ ಮಾಡುತ್ತೀರಿ ಎಂಬುದನ್ನು ಇದೇ ಜುಲೈ 17ರೊಳಗೆ ನಮಗೆ ತಿಳಿಸಿ ಎಂದು ಸರಕಾರಕ್ಕೆ ಅಪ್ಪಣೆ ಮಾಡಿದರು.

Add Asianetnews Kannada as a Preferred SourcegooglePreferred

“ಜೈಲುಶಿಕ್ಷೆ ಅನುಭವಿಸುವುದೂ ಸೇರಿದಂತೆ ಅನಿವಾರ್ಯ ಕಾರಣಗಳಿಂದ ಡಿ.30ರೊಲಗೆ ನೋಟು ಬದಲಾವಣೆ ಮಾಡದವರಿಗೆ ಈಗ ಅವಕಾಶ ನಿರಾಕರಿಸುವುದು ನಿಜಕ್ಕೂ ಗಂಭೀರ ವಿಷಯ ಎಂದು ಮುಖ್ಯನ್ಯಾಯಮುರ್ತಿಗಳು ಹೇಳಿದರು.

ನವೆಂಬರ್ 8ರ ಮಧ್ಯರಾತ್ರಿಯಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದಾಗಿ ದಿಢೀರ್ ಘೋಷಣೆ ಮಾಡಿದ್ದರು. ಡಿ.30ರೊಳಗೆ ಜನರು ತಮ್ಮ ಹಳೆಯ ನೋಟುಗಳನ್ನು ಪೋಸ್ಟ್ ಆಫೀಸ್ ಮತ್ತು ಬ್ಯಾಂಕುಗಳಲ್ಲಿ ಎಕ್ಸ್’ಚೇಂಜ್ ಮಾಡುವಂತೆ ಸೂಚಿಸಲಾಯಿತು. ಮಾರ್ಚ್ ತಿಂಗಳವರೆಗೂ ಜನರು ಆರ್’ಬಿಐನಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್ ಮಾಡುವ ಅವಕಾಶ ಒದಗಿಸಲಾಗಿತ್ತು. ಆ ನಂತರ, ಹಳೆಯ ನೋಟುಗಳನ್ನು ಎಲ್ಲಿಯೂ ಸ್ವೀಕರಿಸಲಾಗುತ್ತಿಲ್ಲ. ಅವು ಅಕ್ಷರಶಃ ರದ್ದಿಯಾಗಿವೆ.