ಅಮಿತ್ ಶಾ, ಸ್ಮೃತಿ ಇರಾನಿಯಿಂದ ತೆರವಾದ ಸ್ಥಾನ : ಜು.5ಕ್ಕೆ ಉಪಚುನಾವಣೆ
ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸ್ಮತಿ ಇರಾನಿ, ರವಿಶಂಕರ್ ಪ್ರಸಾದ್ ಅವರು ಲೋಕ ಸಭೆಗೆ ಆಯ್ಕೆಯಾದ ಹಿನ್ನೆಲೆ ತೆರವಾದ ಸ್ಥಾನಗಳೂ ಸೇರಿ ಒಟ್ಟು 6 ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
ನವದೆಹಲಿ: ರಾಜ್ಯಸಭಾ ಸದಸ್ಯರಾಗಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸ್ಮತಿ ಇರಾನಿ, ರವಿಶಂಕರ್ ಪ್ರಸಾದ್ ಅವರು ಲೋಕ ಸಭೆಗೆ ಆಯ್ಕೆಯಾದ ಹಿನ್ನೆಲೆ ತೆರವಾದ ಸ್ಥಾನಗಳೂ ಸೇರಿ ಒಟ್ಟು 6 ರಾಜ್ಯಸಭಾ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.
ಚುನಾವಣಾ ಆಯೋಗವು ಜುಲೈ.5ಕ್ಕೆ ಉಪಚುನಾವಣೆಯನ್ನು ಘೋಷಣೆ ಮಾಡಿದೆ.
ಬಿಜೆಪಿಯ ಅಮಿತ್ ಶಾ, ಸ್ಮತಿ ಇರಾನಿ, ರವಿಶಂಕರ ಪ್ರಸಾದ್ ಬಿಜೆಡಿಯ ಅಚ್ಯುತ ಸಮಂತ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇವರೆಲ್ಲಾ ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಚುನಾವಣೆ ಘೋಷಣೆಯಾಗಿದೆ.