ಪ್ರಧಾನಿ ನರೇಂದ್ರ ಮೋದಿ ನ.8ರಂದು ನೋಟು ರದ್ದು ಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ. ಕೇಂದ್ರ ಸರಕಾರದ ಕ್ರಮಕ್ಕೆ ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದು ಈ ಚುನಾವಣೆಗಳಿಂದ ತಿಳಿದುಬರುವ ಸಾಧ್ಯತೆ ಇದೆ.

ನವದೆಹಲಿ(ನ. 22): ಮೂರು ದಿನಗಳ ಹಿಂದೆ ದೇಶಾದ್ಯಂತ ಕೆಲ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. 4 ಸಂಸತ್ ಹಾಗೂ 10 ವಿಧಾನಸಭಾ ಕ್ಷೇತ್ರಗಳಿಗೆ ನ.19ರಂದು ಉಪಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮಧ್ಯಾಹ್ನದಷ್ಟರಲ್ಲಿ ಎಲ್ಲ ಫಲಿತಾಂಶ ಹೊರಬೀಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸದ್ಯ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಟಿಎಂಸಿ ಪಕ್ಷಗಳು ತಲಾ 2 ಕ್ಷೇತ್ರಗಳನ್ನು ಜಯಿಸಿದ್ದವು. ಇನ್ನು, 10 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕಳೆದ ಬಾರಿ 4ರಲ್ಲಿ ಜಯಿಸಿತ್ತು. ಬಿಜೆಪಿ, ಟಿಎಂಸಿ, ಎಐಎಡಿಎಂಕೆ ಮತ್ತು ಸಿಪಿಐ-ಎಂ ಪಕ್ಷಗಳು ತಲಾ ಒಂದೊಂದರಲ್ಲಿ ಜಯಿಸಿದ್ದವು. ಇನ್ನೆರಡು ಕ್ಷೇತ್ರಗಳಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಚುನಾವಣೆಗಳನ್ನು ರದ್ದುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 14 ಉಪಚುನಾವಣೆಗಳು ಬಹಳ ಮಹತ್ವ ಪಡೆದಿವೆ.. ಅದರಲ್ಲೂ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ ಮತ್ತು ಟಿಎಂಸಿ ಪಕ್ಷಗಳಿಗೆ ಇವು ಅಗ್ನಿಪರೀಕ್ಷೆಗಳೆನಿಸಿವೆ.

ಪ್ರಧಾನಿ ನರೇಂದ್ರ ಮೋದಿ ನ.8ರಂದು ನೋಟು ರದ್ದು ಕ್ರಮ ಘೋಷಿಸಿದ ಹಿನ್ನೆಲೆಯಲ್ಲಿ ಈ ಉಪಚುನಾವಣೆಗಳು ಪ್ರಾಮುಖ್ಯತೆ ಪಡೆದಿವೆ. ಕೇಂದ್ರ ಸರಕಾರದ ಕ್ರಮಕ್ಕೆ ಜನರು ಯಾವ ರೀತಿಯಲ್ಲಿ ಸ್ವೀಕರಿಸಿದ್ದಾರೆ ಎಂಬುದು ಈ ಚುನಾವಣೆಗಳಿಂದ ತಿಳಿದುಬರುವ ಸಾಧ್ಯತೆ ಇದೆ.

ಯಾವ್ಯಾವ ಕ್ಷೇತ್ರಗಳಿಗೆ ಉಪಚುನಾವಣೆ?

ಲೋಕಸಭಾ ಕ್ಷೇತ್ರಗಳು ಹಾಗೂ ಹಾಲಿ ವಿಜೇತರು:
1) ಲಖೀಂಪುರ್, ಅಸ್ಸಾಮ್ - ಬಿಜೆಪಿ
2) ಶಾಹದೋಲ್, ಮಧ್ಯಪ್ರದೇಶ - ಬಿಜೆಪಿ
3) ಕೂಚ್ ಬಿಹಾರ್, ಪ.ಬಂಗಾಳ - ಟಿಎಂಸಿ
4) ತಾಮಲುಕ್, ಪ.ಬಂಗಾಳ - ಟಿಎಂಸಿ

ವಿಧಾನಸಭಾ ಕ್ಷೇತ್ರಗಳು ಹಾಗೂ ಹಾಲಿ ವಿಜೇತರು:
1) ಬೈತಾಲಾಂಗ್ಸೋ, ಅಸ್ಸಾಮ್ - ಕಾಂಗ್ರೆಸ್
2) ಹಾಯುಲಿಯಾಂಗ್, ಅರುಣಾಚಲಪ್ರದೇಶ - ಕಾಂಗ್ರೆಸ್
3) ನೆಪಾನಗರ್, ಮಧ್ಯಪ್ರದೇಶ - ಬಿಜೆಪಿ
4) ಮೋಂಟೇಶ್ವರ್, ಪ.ಬಂಗಾಳ - ಟಿಎಂಸಿ
5) ತಂಜಾವೂರ್, ತಮಿಳುನಾಡು -
6) ಅರವಕ್ಕುರಿಚಿ, ತಮಿಳುನಾಡು -
7) ತಿರುಪ್ರರನ್'ಕುಂಡ್ರಂ, ತಮಿಳುನಾಡು - ಎಐಎಡಿಎಂಕೆ
8) ನೆಲ್ಲಿತೋಪ್, ಪುದುಚೇರಿ - ಕಾಂಗ್ರೆಸ್
9) ಬರ್ಜಾಲಾ, ತ್ರಿಪುರಾ - ಕಾಂಗ್ರೆಸ್
10) ಖೊವಾಯ್, ತ್ರಿಪುರಾ - ಸಿಪಿಐ-ಎಂ