Asianet Suvarna News Asianet Suvarna News

ಸರಣಿ ಸೋಲಿನಿಂದ ಕಂಗೆಟ್ಟ ಬಿಜೆಪಿ; ಆತಂಕದಲ್ಲಿ ಯಡಿಯೂರಪ್ಪ

  • ಆರ್.ಆರ್.ನಗರ, ವಿಧಾನ ಪರಿಷತ್ತು, ಬಳಿಕ ಇದೀಗ ಜಯನಗರದಲ್ಲಿ ಸೋಲು
  • ಮನೆಯಿಂದ ಹೊರಬಾರದೇ, ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದ ಯಡಿಯೂರಪ್ಪ

 

BS Yeddyurappa Upset Over Series of Defeats

ಬೆಂಗಳೂರು:  ಸರಣಿ ಸೋಲಿನಿಂದ ಕಂಗೆಟ್ಟ ಬಿಜೆಪಿ ಕಂಗೆಟ್ಟಿದ್ದು, ಯಡಿಯೂರಪ್ಪ ಆತಂಕಗೊಂಡಿದ್ದಾರೆಂದು ಹೇಳಲಾಗಿದೆ.

ವಿಧಾನ ಪರಿಷತ್ತು ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶಗಳು ಮಂಗಳವಾರ ಪ್ರಕಟವಾಗಿದ್ದು,  ಬಿಜೆಪಿ ಒಂದು ಸ್ಥಾನ ಕಳೆದುಕೊಂಡಿದೆ.  ರಾಜರಾಜೇಶ್ವರಿ ನಗರ ಚುನಾವಣೆಯಲ್ಲೂ ಬಿಜೆಪಿ ಸೋಲನ್ನನುಭವಿಸಿತ್ತು.  ಇದೀಗ ಜಯನಗರ ವಿಧಾನಸಭೆ ಕ್ಷೇತ್ರದ ಸೋಲಿನಿಂದ ಬಿಜೆಪಿ ಕಂಗೆಟ್ಟಿದೆಯೆನ್ನಲಾಗಿದೆ.

ಈ ಬೆಳವಣಿಗೆಗಳಿಂದ  ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪಆತಂಕಗೊಂಡಿದ್ದಾರೆನ್ನಲಾಗಿದೆ. ಮನೆಯಿಂದ ಹೊರಗೆ ಬಾರದೇ, ಮಾಧ್ಯಮಗಳಿಂದಲೂ ಯಡಿಯೂರಪ್ಪ ಅಂತರ ಕಾಯ್ದುಕೊಂಡಿದ್ದರು.  

ರಾಜ್ಯ ಇತರ ನಾಯಕರ ವಿರುದ್ಧ ಯಡಿಯೂರಪ್ಪ ಬೇಸರಗೊಂಡಿದ್ದು, ಆಪ್ತರ ಭೇಟಿಗೂ ನಿರಾಕರಿಸುತ್ತಿದ್ದಾರೆಯೆನ್ನಲಾಗಿದೆ. 

Follow Us:
Download App:
  • android
  • ios