Asianet Suvarna News Asianet Suvarna News

’ಸರ್ಜಿಕಲ್ ಸ್ಟ್ರೈಕ್: ರಾಜ್ಯದಲ್ಲಿ 22 ಲೋಕಸಭಾ ಸೀಟು ಖಚಿತ’

ಪಾಕ್ ನೆಲದಲ್ಲಿ ಭಾರತೀಯ ಸೇನೆಯ ತಾಕತ್ತು ಪ್ರದರ್ಶನ | ಸರ್ಜಿಕಲ್  ಸ್ಟ್ರೈಕ್ ಬಗ್ಗೆ ಬಿಎಸ್‌ವೈ ಹೇಳಿಕೆ | ಕರ್ನಾಟಕದಲ್ಲಿ 22 ಸೀಟು ಖಚಿತ ಎಂದ ಬಿಎಸ್‌ವೈ 

BS Yadiyurappa political statement over Surgical strike
Author
Bengaluru, First Published Feb 27, 2019, 2:55 PM IST

ಬೆಂಗಳೂರು (ಫೆ. 27): ಭಾರತೀಯ ಸೇನೆ ಪಾಕ್ ಒಳಗೆ ನುಗ್ಗಿ ಉಗ್ರರ ನೆಲೆಯನ್ನು ನಾಶ ಮಾಡಿದೆ. 40 ವರ್ಷದ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ಪ್ರತಿ ರಕ್ತ ಕಣಕ್ಕೂ ಪ್ರತಿಕಾರ ತೆಗೆದುಕೊಂಡಿದ್ದೇವೆ ಎಂದು ಚಿತ್ರದುರ್ಗದಲ್ಲಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.  

ಸರ್ಜಿಕಲ್ ಸ್ಟ್ರೈಕ್ ನಂತರ ಎಲ್ಲೆಲ್ಲೂ ಮೋದಿ ಪರ ಜೈಕಾರ ಕೇಳಿ ಬರುತ್ತಿದೆ. ಮೋದಿ ಪರ ಅಲೆ ಎದ್ದಿದೆ. ಇವೆಲ್ಲದರ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನ ಗೆಲ್ಲುತ್ತೇವೆ ಎಂದು ಬಿಎಸ್ ವೈ ಹೇಳಿದ್ದಾರೆ. 

"

 

Follow Us:
Download App:
  • android
  • ios