ನೀತಿ ಸಂಹಿತೆ ಜಾರಿಯಾಗಿದ್ರೂ ಬಿಎಂಟಿಸಿಯಲ್ಲಿ ರಾರಾಜಿಸುತ್ತಿವೆ ಸಿಎಂ ಸಿದ್ದರಾಮಯ್ಯ ಜಾಹಿರಾತು
ರಾಜ್ಯ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಬಿಎಂಟಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ.
ಬೆಂಗಳೂರು (ಮಾ. 28): ರಾಜ್ಯ ಚುನಾವಣಾ ದಿನಾಂಕ ಘೋಷಣೆಯಾಗಿದ್ದು ನೀತಿ ಸಂಹಿತೆ ಜಾರಿಯಲ್ಲಿದೆ. ಬಿಎಂಟಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ.
ನೀತಿ ಸಂಹಿತೆ ಜಾರಿಯಾಗಿದ್ದು ಸರ್ಕಾರದ ಜಾಹೀರಾತುಗಳನ್ನ ತೆರವು ಮಾಡಲು ಸೂಚಿಸಿದ್ದರೂ ಬಿಎಂಟಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಎಂಟಿಸಿ ಬಸ್’ಗಳ ಮೇಲೆ ನಂಬರ್ 1 ಸಿದ್ದರಾಮಯ್ಯ ಸರ್ಕಾರ ಎಂಬ ಪ್ಲೆಕ್ಸ್ ಗಳು, ರಾಜ್ಯ ಸರ್ಕಾರದ ಜಾಹಿರಾತುಗಳು ರಾರಾಜಿಸುತ್ತಿವೆ.
ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಜಾಹೀರಾತು ಫಲಕಗಳನ್ನ ತೆರವುಗೊಳಿಸಲು ಸೂಚಿಸಲಾಗಿತ್ತು. ನೀತಿ ಸಂಹಿತೆ ಜಾರಿಯಾಗಿ 24 ಗಂಟೆಗಳು ಕಳೆದರೂ ಬಿಎಂಟಿಸಿ ಬಸ್ ಗಳ ಮೇಲೆ ರಾಜ್ಯ ಸರ್ಕಾರದ ಜಾಹೀರಾತುಗಳು ಕಾಣಿಸುತ್ತಿವೆ.