‘ಬಿಜೆಪಿಯಿಂದ ಪಕೋಡಾ ರಾಜಕೀಯ’
- ಬಿಜೆಪಿಯ ಬೆಂಬಲದಿಂದ ಪದ್ಮಾವತಿ ವಿರುದ್ಧ ಪ್ರತಿಭಟನೆ
- ಪ್ರತಿಭಟನಾಕಾರರನ್ನು ಕೆಂಪುಹಾಸು ಹಾಕಿ ಸ್ವಾಗತಿಸಿದ್ದು ಖುದ್ದು ಬಿಜೆಪಿ
ಹೈದರಾಬಾದ್: ಪದ್ಮಾವತ್ ಚಿತ್ರ ಬಿಡುಗಡೆಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ, ಬಿಜೆಪಿಯು ‘ಪಕೋಡಾ’ ರಾಜಕೀಯ ಮಾಡುತ್ತಿದೆಯೆಂದು ವ್ಯಂಗ್ಯವಾಡಿದ್ದಾರೆ.
ಪದ್ಮಾವತಿ ಚಿತ್ರವನ್ನು ಪ್ರತಿಭಟಿಸುತ್ತಿರುವವರನ್ನು ಕೆಂಪು ಹಾಸಿ ಸ್ವಾಗತಿಸಿದ್ದು ಖುದ್ದು ಪ್ರಧಾನಿ ಮೋದಿ ಹಾಗೂ ಬಿಜೆಪಿ. ಈಗ ಆ ಮಂದಿ ಕಾನೂನನ್ನು ಮೀರಿ ಬೆಳೆದಿದ್ದಾರೆ, ಮಕ್ಕಳ ಮೇಲೆ ಹಲ್ಲೆ ನಡೆಸಿ ಆಸ್ತಿ-ಪಾಸ್ತಿಗಳಿಗೆ ಬೆಂಕಿಯಿಡುತ್ತಿದ್ದಾರೆ. ಇದೆಲ್ಲವೂ ಬಿಜೆಪಿಯ ‘ಜಾಣ’ ಬೆಂಬಲದಿಂದ ನಡೆಯುತ್ತಿದೆ. ಬಿಜೆಪಿಯದ್ದು ಇದೊಂದು ಪಕೋಡಾ ರಾಜಕೀಯ, ಎಂದು ಒವೈಸಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ಪಕೋಡಾ ಮಾರಿ ರೂ.200 ಸಂಪಾದನೆ ಮಾಡುವುದು ಕೂಡಾ ಉದ್ಯೋಗವೇ ಎಂದಿದ್ದರು. ಆ ಬಳಿಕ ಪ್ರತಿಪಕ್ಷಗಳು ಅದನ್ನೇ ಮೋದಿ ವಿರುದ್ಧ ಅಸ್ತ್ರವಾಗಿ ಮೋದಿ ಬಳಸುತ್ತಿವೆ.