Asianet Suvarna News Asianet Suvarna News

ಹುತಾತ್ಮ ಸೈನಿಕರ ಕುಟುಂಬಸ್ಥರನ್ನು ಅವಮಾನಿಸಿದ್ರಾ ಪ್ರತಾಪ್ ಸಿಂಹ?

ಹುತಾತ್ಮ ಸೈನಿಕರನ್ನು ಅಗೌರವಿಸಿದ್ರಾ ಪ್ರತಾಪ್ ಸಿಂಹ?! ಡ್ರಾಮಾ ಮಾಡ್ಬೇಡಿ ಎಂದು ಗದರಿದ ಸಿಂಹ! ಹುತಾತ್ಮ ಸೈನಿಕರ ಕುಟುಂಬಕ್ಕೆ ಸಹಾಯಧನ ಘೋಷಿಸಿದ ಇನ್ಫೋಸಿಸ್
 

ಮೈಸೂರು(ಅ.17): ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಸೈನಿಕರ ಕುಟುಂಬವನ್ನು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವಮಾನಿಸಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ.

ಇನ್ಫೋಸಿಸ್ ಸಂಸ್ಥೆ ಹುತಾತ್ಮ ಸೈನಿಕರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಸಹಾಯಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಹುತಾತ್ಮ ಸೈನಿಕರ ಕಟುಂಬಸ್ಥರು ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಹುತಾತ್ಮ ಸೈನಿಕರ ಕುಟುಂಬವನ್ನು ಅವಮಾನಿಸಿರುವ ಸಿಂಹ, ‘ಇಲ್ಲಿ ನಾಟಕ ಮಾಡಬೇಡಿ, ಸುಮ್ಮನೆ ಮೂಲೆಯಲ್ಲಿ ಕುಳಿತುಕೊಳ್ಳಿ..’ ಎಂದು ಗದರಿದ್ದಾರೆ ಎನ್ನಲಾಗಿದೆ.

ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರತಾಪ್ ಸಿಂಹ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಈ ಕುರಿತು ಫೇಸ್ ಬುಕ್ ಲೈವ್ ಮಾಡಿ ಸ್ಪಷ್ಟನೆ ನೀಡಿರುವ ಸಿಂಹ, ತಾವು ಸೈನಿಕರ ಕುಟುಂಬವನ್ನು ಅವಮನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Video Top Stories