ಬಿಎಸ್ವೈ ನಿವಾಸದಲ್ಲಿ ಬಿಜೆಪಿ ನಾಯಕರ ದಂಡು!
ಹಬ್ಬದ ದಿನವೂ ಬಿಎಸ್ವೈ ನಿವಾಸಕ್ಕೆ ಬಿಜೆಪಿ ನಾಯಕರು! ಶುಭಾಶಯ ನೆಪದಲ್ಲಿ ರಾಜಕೀಯ ಚರ್ಚೆ ನಡೆದಿರುವ ಸಾಧ್ಯತೆ! ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸ! ಹಬ್ಬದ ಬಳಿಕ ಆಪರೇಶನ್ ಕಮಲದ ವೇಗ ಹೆಚ್ಚು?
ಬೆಂಗಳೂರು(ಸೆ.13): ಹಬ್ಬ ಮುಗಿಯುತ್ತಿದ್ದಂತೇ ಆಪರೇಶನ್ ಕಮಲದ ವೇಗ ಹೆಚ್ಚಾಗಬಹುದು ಎಂಬ ಗುಮಾನಿ ಎದ್ದಿದೆ. ಇದಕ್ಕೆ ಪೂರಕ ಎಂಬಂತೆ ಹಬ್ಬದ ದಿನವೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದರು.
ಹಬ್ಬದ ದಿನವೂ ಯಡಿಯೂರಪ್ಪ ನಿವಾಸದಲ್ಲಿ ಶಾಸಕರ ದಂಡು ಕಂಡು ಬಂದಿದ್ದು, ಗಣೇಶ ಹಬ್ಬದ ಪ್ರಯುಕ್ತ ಶುಭಾಶಯ ನೆಪದಲ್ಲಿ ರಾಜಕೀಯ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಸುರಪುರ ಬಿಜೆಪಿ ಶಾಸಕ ರಾಜು ಗೌಡ ಸೇರಿದಂತೆ ಹಲವರು ಭೇಟಿ ನೀಡಿದ್ದರು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..