ಹೊಸ ರಾಜ್ಯಪಾಲರ ನೇಮಕ: ಇವರೂ ಬಿಜೆಪಿ ಮಾಜಿ ನಾಯಕ!
ದಿಡೀರ್ ಬೆಳವಣಿಗೆಯಲ್ಲಿ ನೂತನ ರಾಜ್ಯಪಾಲರ ನೇಮಕ| ರಾಷ್ಟ್ರಪತಿ ಭವನದಿಂದ ಆದೇಶ ಪ್ರಕಟಣೆ| ಒಡಿಶಾದ ಹಿರಿಯ ಬಿಜೆಪಿ ನಾಯಕ ಸ್ವ ಭೂಷಣ್ ಹರಿಚಂದನ್| ಆಂಧ್ರದ ನೂತನ ರಾಜ್ಯಪಾಲರಾಗಿ ಸ್ವ ಭೂಷಣ್ ಹರಿಚಂದನ್ ನೇಮಕ| ಛತ್ತೀಸ್ ಗಢ ರಾಜ್ಯಪಾಲರಾಗಿ ಸುಶ್ರೀ ಅನುಸುಯಾ ಯುಕೇ ನೇಮಕ|
ನವದೆಹಲಿ(ಜು.16): ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ನೂತನ ರಾಜ್ಯಪಾಲರಾಗಿ ಬಿಸ್ವ ಭೂಷಣ್ ಹರಿಚಂದನ್ ಅವರನ್ನು ನೇಮಕ ಮಾಡಲಾಗಿದೆ.
ಈ ಕುರಿತು ರಾಷ್ಟ್ರಪತಿ ಭವನ ಆದೇಶ ಹೊರಡಿಸಿದ್ದು, ಇದೇ ವೇಳೆ ಛತ್ತೀಸ್ ಗಢ ರಾಜ್ಯಪಾಲರಾಗಿ ಸುಶ್ರೀ ಅನುಸುಯಾ ಯುಕೇ ಅವರನ್ನು ನೇಮಕ ಮಾಡಲಾಗಿದೆ.
President of India, Ram Nath Kovind appoints Anusuiya Uikey as Governor of Chhattisgarh & Biswa Bhusan Harichandan as Governor of Andhra Pradesh. pic.twitter.com/diLaJQJ2hz
— ANI (@ANI) July 16, 2019
ಒಡಿಶಾದ ಹಿರಿಯ ಬಿಜೆಪಿ ನಾಯಕರಗಿರುವ ಸ್ವ ಭೂಷಣ್ ಹರಿಚಂದನ್, 1980ರಿಂದ 1988ರ ವರೆಗೆ ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.