Asianet Suvarna News Asianet Suvarna News

ಹೊಸ ರಾಜ್ಯಪಾಲರ ನೇಮಕ: ಇವರೂ ಬಿಜೆಪಿ ಮಾಜಿ ನಾಯಕ!

ದಿಡೀರ್ ಬೆಳವಣಿಗೆಯಲ್ಲಿ ನೂತನ ರಾಜ್ಯಪಾಲರ ನೇಮಕ| ರಾಷ್ಟ್ರಪತಿ ಭವನದಿಂದ ಆದೇಶ ಪ್ರಕಟಣೆ| ಒಡಿಶಾದ ಹಿರಿಯ ಬಿಜೆಪಿ ನಾಯಕ ಸ್ವ ಭೂಷಣ್ ಹರಿಚಂದನ್| ಆಂಧ್ರದ ನೂತನ ರಾಜ್ಯಪಾಲರಾಗಿ ಸ್ವ ಭೂಷಣ್ ಹರಿಚಂದನ್ ನೇಮಕ| ಛತ್ತೀಸ್ ಗಢ ರಾಜ್ಯಪಾಲರಾಗಿ ಸುಶ್ರೀ ಅನುಸುಯಾ ಯುಕೇ ನೇಮಕ| 

Biswa Bhusan Harichandan Appointed Andhra Pradesh Governor
Author
Bengaluru, First Published Jul 16, 2019, 8:23 PM IST

ನವದೆಹಲಿ(ಜು.16): ಮಹತ್ವದ ಬೆಳವಣಿಗೆಯೊಂದರಲ್ಲಿ ಆಂಧ್ರ ಪ್ರದೇಶ ನೂತನ ರಾಜ್ಯಪಾಲರಾಗಿ ಬಿಸ್ವ ಭೂಷಣ್ ಹರಿಚಂದನ್ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ರಾಷ್ಟ್ರಪತಿ ಭವನ ಆದೇಶ ಹೊರಡಿಸಿದ್ದು, ಇದೇ ವೇಳೆ ಛತ್ತೀಸ್ ಗಢ ರಾಜ್ಯಪಾಲರಾಗಿ ಸುಶ್ರೀ ಅನುಸುಯಾ ಯುಕೇ ಅವರನ್ನು ನೇಮಕ ಮಾಡಲಾಗಿದೆ.

ಒಡಿಶಾದ ಹಿರಿಯ ಬಿಜೆಪಿ ನಾಯಕರಗಿರುವ ಸ್ವ ಭೂಷಣ್ ಹರಿಚಂದನ್, 1980ರಿಂದ 1988ರ ವರೆಗೆ ಒಡಿಶಾ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

Follow Us:
Download App:
  • android
  • ios