ಬಿಗ್ 3: ಹೊಳಲ್ಕೆರೆ ನಿರಾಶ್ರಿತರಿಗೆ ನ್ಯಾಯ ಸಿಕ್ಕಿತೆ?
ಹೊಳಲ್ಕೆರೆ ನಿರಾಶ್ರಿತರ ಬವಣೆಗೆ ಸಿಗುತ್ತಾ ಮುಕ್ತಿ?
ರಾಮಗಗಿರಿ ಬಡಾವಣೆಯ ಕಥೆ ಏನು? ವ್ಯಥೆ ಏನು?
ಎಚ್ಚೆತ್ತುಕೊಂಡಿದ್ದಾರಾ ಅಧಿಕಾರಿಗಳು, ಜನಪ್ರತಿನಿಧಿಗಳು?
ಹೊಳಲ್ಕೆರೆ(ಜು.14): ತಾಲೂಕಿನ ರಾಮಗಿರಿ ಬಡಾವಣೆಯಲ್ಲಿ ವಾಸಿಸುತ್ತಿದ್ದ ಜನರನ್ನು, ಬೇರೆ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಹಿಂದಿನ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿ ಒಕ್ಕಲೆಬಿಸಿತ್ತು.
ಮಾಜಿ ಸಚಿವ ಹೆಚ್. ಆಂಜನೇಯ ಈ ಜನರಿಗೆ ಆರ್ ಸಿಸಿ ಮನೆ ಕಟ್ಟಿ ಕೊಟುವುದಾಗಿ ಭರವಸೆ ನೀಡಿ ರಾಮಗಿರಿ ಬಡಾವಣೆ ಖಾಲಿ ಮಾಡಿಸಿದ್ದರು. ಆದರೆ ಕೇವಲ ಎರಡು ಮನೆ ಕಟ್ಟಿ ಕೈ ಎತ್ತಿದ್ದರು ಆಂಜನೇಯ.
ಇವರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಸುವರ್ಣ ನ್ಯೂಸ್ ಬಿಗ್ ೩ ವರದಿ ಮಾಡಿದ ಬಳಿಕ ಶಾಸಕ ಚಂದ್ರಪ್ಪ ಶಂಕುಸ್ಥಾಪನೆ ಕೂಡ ನೆರವೇರಿಸಿ ಶೀಘ್ರದಲ್ಲೇ ಮನೆಗಳ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು.
ಜನಪ್ರತಿನಿಧಿಗಳ ಈ ಭರವಸೆ ಎಲ್ಲಿಗೆ ಬಂದು ನಿಂತಿದೆ. ನಿರಾಶ್ರಿತರಿಗೆ ಮನೆ ಸಿಗಲಿದೆಯೇ?. ನಿರಾಶ್ರಿತರಿಗೆ ಮನೆ ಸಿಗುವವರೆಗೂ ಸುವರ್ಣ ನ್ಯೂಸ್ ಸುಮ್ಮನೆ ಕೂರಲ್ಲ ಎಂಬುದು ಈ ವಿಡಿಯೋ ಸಾಬೀತು ಮಾಡಿದೆ.