ಭಾರತದಲ್ಲಿ ಇನ್ನೊಮ್ಮೆ ನೋಟು ಅಮಾನ್ಯಗೊಂಡರೆ ಹೊಣೆ ಅಲ್ಲ: ಭೂತಾನ್ ರಿಸರ್ವ್ ಬ್ಯಾಂಕ್ !
ಭಾರತದಲ್ಲಿ ಇನ್ನೊಮ್ಮೆ ಅಪನಗದೀಕರಣ ಘೋಷಣೆ ಮಾಡುವ ಅಪಾಯ ಇರುವುದರಿಂದ 500 ರು. ಮುಖ ಬೆಲೆಯ 25000 ರು.ಗಿಂತ ಹೆಚ್ಚಿನ ನೋಟುಗಳನ್ನು ಭಾರತದಿಂದ ತರುವ ಇಲ್ಲವೇ ಕೊಂಡೊಯ್ಯದಂತೆ ಭೂತಾನ್ ರಿಸವ್ರ್ ಬ್ಯಾಂಕ್- ರಾಯಲ್ ಮೊನಿಟರಿ ಅಥಾರಿಟಿ ಆಫ್ ಇಂಡಿಯಾ ಸಾರ್ವಜನಿಕರಿಗೆ ಸೂಚಿಸಿದೆ.
ನವದೆಹಲಿ (ಜೂ. 20): ಭಾರತದಲ್ಲಿ ಇನ್ನೊಮ್ಮೆ ಅಪನಗದೀಕರಣ ಘೋಷಣೆ ಮಾಡುವ ಅಪಾಯ ಇರುವುದರಿಂದ 500 ರು. ಮುಖ ಬೆಲೆಯ 25000 ರು.ಗಿಂತ ಹೆಚ್ಚಿನ ನೋಟುಗಳನ್ನು ಭಾರತದಿಂದ ತರುವ ಇಲ್ಲವೇ ಕೊಂಡೊಯ್ಯದಂತೆ ಭೂತಾನ್ ರಿಸವ್ರ್ ಬ್ಯಾಂಕ್- ರಾಯಲ್ ಮೊನಿಟರಿ ಅಥಾರಿಟಿ ಆಫ್ ಇಂಡಿಯಾ ಸಾರ್ವಜನಿಕರಿಗೆ ಸೂಚಿಸಿದೆ.
ಒಂದು ವೇಳೆ ಆರ್ಬಿಐ ತನ್ನ ನಿಯಮವನ್ನು ಬದಲಾವಣೆ ಮಾಡಿದರೆ ಅಥವಾ ಇನ್ನೊಮ್ಮೆ ನೋಟು ಅಮಾನ್ಯ ಮಾಡುವ ನಿರ್ಧಾರ ಕೈಗೊಂಡರೆ ಅದಕ್ಕೆ ತಾನು ಯಾವುದೇ ರೀತಿಯ ಜವಾಬ್ದಾರನಲ್ಲ. ಅದಕ್ಕೆ ಜನರೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದೆ.