ಬೆಂಗಳೂರಿಗೆ ಅಮರ್, ಅಕ್ಬರ್, ಆಂತೋನಿ
ಬೆಂಗಳೂರು ನಗರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಮೂವರಿಗೆ ಅವಕಾಶ ನೀಡಲಾಗಿದ್ದು 3 ಜನ ವಿವಿಧ ಧರ್ಮದವರಾಗಿರುವುದು ವಿಶೇಷ
ಬೆಂಗಳೂರು[ಜೂ.08]: ಸಂಪುಟ ಖಾತೆ ಹಂಚಿಕೆಯಲ್ಲಿ ಬೆಂಗಳೂರು ನಗರ ಜಿಲ್ಲೆಗೆ 3 ಸಚಿವ ಸ್ಥಾನ ನೀಡಲಾಗಿದ್ದು ಮೂವರು ವಿವಿಧ ಧರ್ಮದವರಾಗಿರುವುದು ವಿಶೇಷ. ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ನೀಡಿದರೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಾನ್'ಗೆ ಅಹಾರ ಮತ್ತು ನಾಗರಿಕ ಪೂರೈಕೆ , ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಸಚಿವರಾಗಿದ್ದಾರೆ. ಸರ್ವಜ್ಞ ನಗರದ ಶಾಸಕ ಕೆ.ಜೆ. ಜಾರ್ಜ್ ಅವರು ಬೃಹತ್, ಐಟಿ ಬಿಟಿ ಖಾತೆ ನಿಭಾಯಿಸಲಿದ್ದಾರೆ.
ಇದನ್ನು ಓದಿ: ಖಾತೆಗಳ ಹಂಚಿಕೆಗೆ ತೆರೆ : ಯಾರ್ಯಾರಿಗೆ ಯಾವ ಖಾತೆ ಇಲ್ಲಿದೆ ಫುಲ್ ಲಿಸ್ಟ್