ಬೆಂಗಳೂರು(ಸೆ.14): ಬೆಂಗಳೂರು ಮೇಯರ್​​​ ಹಾಗೂ ಉಪ ಮೇಯರ್​​​ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಮತ್ತೊಮ್ಮೆ ಮೇಯರ್​​ ಗಾದಿ ಹಿಡಿಯಲು ಕಾಂಗ್ರೆಸ್​​ ರಣತಂತ್ರ ಹೆಣೆದಿದೆ. ಜೆಡಿಎಸ್​​ ಜೊತೆ ಮೈತ್ರಿ ಬಿದ್ದರೆ ಈ ರಣತಂತ್ರ ಹೆಣೆದಿದೆ. 

ಮೇಯರ್ ಹಾಗೂ ಉಪ-ಮೇಯರ್ ಚುನಾವಣೆ ಮತದಾರರ ಪಟ್ಟಿಯಲ್ಲಿ ಕಾಂಗ್ರೆಸ್​​​ ಹೊಸ ಹೆಸರುಗಳ ಸೇರ್ಪಡೆ ಮಾಡಿದೆ. ರಾಜ್ಯಸಭಾ ಸದಸ್ಯರಾದ ಆಸ್ಕರ್​ ಫರ್ನಾಂಡಿಸ್​, ಜೈರಾಂ ರಮೇಶ್​​, ಪರಿಷತ್​ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್​​.ಬಿ.ತಿಮ್ಮಾಪುರ, ಎನ್​​.ಎಸ್​​.ಬೋಸರಾಜು ಹೆಸರನ್ನು ಸೇರ್ಪಡೆ ಮಾಡಿ ತಮ್ಮ ಮತದಾರರ ಪಟ್ಟಿಯನ್ನು ಹೆಚ್ಚಿಕೊಂಡಿದೆ. 

ಇವರಲ್ಲದೇ ನಾಮನಿರ್ದೇಶಿತ ಪರಿಷತ್​ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ, ಗೃಹ ಸಚಿವ ಹಾಗೂ ಪರಿಷತ್​ ಸದಸ್ಯ ಪರಮೇಶ್ವರ್​​ ಹೆಸರೂ ಕೂಡಾ ಸೇರ್ಪಡೆಯಾಗಿದೆ. ಇದ್ರ ಜೊತೆಗೆ ಸಚಿವ ಡಿ.ಕೆ.ಶಿವಕುಮಾರ್ ಸಂಬಂಧಿ ಹಾಗೂ ಪರಿಷತ್​​ ಸದಸ್ಯ ರವಿ ಹೆಸರು ಕೂಡಾ ಸೇರ್ಪಡೆ ಯಾಗುವಸಾಧ್ಯತೆ ಇದೆ. ಇವರೆಲ್ಲರ ಹೆಸರುಗಳನ್ನ ಕಾಂಗ್ರೆಸ್​​​ ಕಳೆದ ತಿಂಗಳು ಆತುರವಾಗಿ ಸೇರ್ಪಡೆ ಮಾಡಿದೆ.