ಬೆಂಗಳೂರು (ಸೆ.21): ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ ಬಿಬಿಎಂಪಿ ಕಾರ್ಪೊರೇಟರ್’ಗಳು ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ರಾಜೀನಾಮೆ ನೀಡಲು ಕಾರ್ಪೊರೇಟರ್’ಗಳು ತೀರ್ಮಾನಿಸಿದ್ದಾರೆ.

ರಾಜೀನಾಮೆ ನೀಡಲಿರುವ ಕಾಂಗ್ರೆಸ್​ ಕಾರ್ಪೊರೇಟರ್​ಗಳು ನಾಳೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ಗೆ ರಾಜೀನಾಮೆ ಸಲ್ಲಿಸಲಿದ್ದಾರೆ.

ಯಶವಂತಪುರ ವಾರ್ಡ್​ ಸದಸ್ಯ ಜಿ.ಕೆ.ವೆಂಕಟೇಶ್​, ಲಕ್ಷ್ಮಿದೇವಿ ನಗರ ವಾರ್ಡ್​’ನ ಎಂ.ವೇಲು ನಾಯಕರ್, ಕೊಟ್ಟಿಗೆಪಾಳ್ಯ ವಾರ್ಡ್’ನ ಜಿ.ಮೋಹನ್​ ಕುಮಾರ್​ ಹಾಗೂ ಜಾಲಹಳ್ಳಿ ವಾರ್ಡ್​ ಶ್ರೀನಿವಾಸ ಮೂರ್ತಿ ನಾಳೆ ರಾಜೀನಾಮೆ ನೀಡಲಿದ್ದಾರೆ.