ಯತ್ನಾಳ ಬಿಜೆಪಿ ಸೇರ್ಪಡೆಗೆ ಆಗ್ರಹ: ಬೆಂಬಲಿಗರ ಕಾಲ್ನಡಿಗೆ
ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಮುದ್ದೇಬಿಹಾಳದಿಂದ ವಿಜಯಪುರದವರೆಗೆ ‘ಯತ್ನಾಳ ಬುಲಾವೋ- ಬಿಜೆಪಿ ಬಚಾವೋ ಪಾದಯಾತ್ರೆ’ ನಡೆಸಿದರು.
ವಿಜಯಪುರ: ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಮುದ್ದೇಬಿಹಾಳದಿಂದ ವಿಜಯಪುರದವರೆಗೆ ‘ಯತ್ನಾಳ ಬುಲಾವೋ- ಬಿಜೆಪಿ ಬಚಾವೋ ಪಾದಯಾತ್ರೆ’ ನಡೆಸಿದರು.
ಬೆಳಗ್ಗೆ ಜಿಲ್ಲೆಯ ಮುದ್ದೇಬಿಹಾಳದಿಂದ ಹೊರಟ ಯತ್ನಾಳ ಅಭಿಮಾನಿಗಳ ಪಾದಯಾತ್ರೆ ಮಧ್ಯಾಹ್ನ ವೇಳೆ ನಗರದ ಸಿದ್ಧೇಶ್ವರ ದೇವಾಲಯದಲ್ಲಿ ಮುಕ್ತಾಯಗೊಂಡಿತು.