ಫೆಬ್ರವರಿ 19ರಿಂದ ಏಪ್ರಿಲ್ 30ರವರೆಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವವರು ನಾಲ್ಕು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರು(ಜ. 18): ರನ್ ವೇ ಕಾಮಗಾರಿ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಶ್ಚಿತ ಅವಧಿಯಲ್ಲಿ ಬಂದ್ ಆಗಲಿದೆ. ಫೆಬ್ರವರಿ 19ರಿಂದ ಏಪ್ರಿಲ್ 30ರವರೆಗೆ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆ ಇರುವುದಿಲ್ಲ. ಏರ್'ಪೋರ್ಟ್'ನಲ್ಲಿನ ರನ್'ವೇ ವಿಸ್ತರಣಾ ಕೆಲಸ ನಡೆಯಲಿರುವುದರಿಂದ ಬಂದ್ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ, ನಿರ್ಗಮನ ಇರುವುದಿಲ್ಲ.
ಇನ್ನು, ಫೆಬ್ರವರಿ 19ರಿಂದ ಏಪ್ರಿಲ್ 30ರವರೆಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವವರು ನಾಲ್ಕು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- ಶಶಿಶೇಖರ್, ಸುವರ್ಣನ್ಯೂಸ್
