Asianet Suvarna News Asianet Suvarna News

ಸೈನಿಕರ ನಿಧಿಗೆ ಕಿಸಾನ್ ಸಮ್ಮಾನ್ ಕಲ್ಯಾಣ ನಿಧಿ ಬಳಸಲು ಮನವಿ ಮಾಡಿದ ಬಾಗಲಕೋಟೆ ರೈತ

ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಸೈನಿಕರ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ಬಾಗಲಕೋಟೆ ರೈತರೋರ್ವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. 

Bagalkote farmer donates Kisan Samman aid to soldiers welfare fund
Author
Bengaluru, First Published Mar 2, 2019, 12:34 PM IST

ಬಾಗಲಕೋಟೆ :  ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯನ್ನು ಸೈನಿಕರ ಕಲ್ಯಾಣಕ್ಕೆ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ರೈತರೋರ್ವರು ಪತ್ರ ಬರೆದು ದೇಶಪ್ರೇಮ ಮೆರೆದಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದ ರೈತ ವೆಂಕಣ್ಣ ಹುಣಸಿಕಟ್ಟಿ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಒದಗಿಸಲಿರುವ 6 ಸಾವಿರ ರೂ.ಹಣ ಸೈನಿಕರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲು ಮನವಿ‌ ಮಾಡಿದ್ದಾರೆ.

ಪೈಲಟ್ ಅಭಿನಂದನ್ ಜೊತೆ ವಾಘಾ ಬಾರ್ಡರ್ ನಲ್ಲಿ ಕಾಣಿಸಿಕೊಂಡ ಆ ಮಹಿಳೆ ಯಾರು? 

ದೇಶದ ಗಡಿಭಾಗದಲ್ಲಿ ಸೈನಿಕರು ಗಡಿ ಕಾವಲು ಕಾಯುತ್ತಿದ್ದಾರೆ, ರೈತರು ಜನರಿಗೆ ಅನ್ನ ನೀಡುತ್ತಿದ್ದಾರೆ.  ದೇಶದ ಸೈನಿಕರು ಹಗಲಿರಳು ಎನ್ನದೇ 24 ಗಂಟೆಗಳ ಕಾಲ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ತಾವು  ಕಿಸಾನ್ ಸಮ್ಮಾನ್ ನಿಧಿಯಿಂದ ಒದಗಿಸಲಿರುವ  6 ಸಾವಿರ ಹಣವನ್ನ ಸೈನಿಕರ ಕಲ್ಯಾಣ ನಿಧಿಗೆ ಬಳಸಲು ಪತ್ರದ ಮೂಲಕ ತಿಳಿಸಿದರು. 

ಈ ಎಲ್ಲಾ ವಿಚಾರವನ್ನು ಪತ್ರದಲ್ಲಿ ಬರೆದು ರೈತ  ವೆಂಕಣ್ಣ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.  

Follow Us:
Download App:
  • android
  • ios