ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಬೆಂಗಳೂರು (ಜ.09): ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗ್ಗೆ 9 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಲುವೆಗೆ ಬಿದ್ದಿದೆ. ಮಗು ಬಿದ್ದು ಒಂದು ಗಂಟೆಯಾದರೂ ಕೂಡ ಯಾರೂ ಗಮನಿಸಿರಲಿಲ್ಲ. ನಂತರ ನೋಡುವಾಗ ಮಗು ಮೃತಪಟ್ಟಿದೆ.

ಸುಮಾರು 15 ಕುಟುಂಬಗಳು ಈ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿವೆ. ಘಟನಾ ಸ್ಥಳಕ್ಕೆ ಯಲಹಂಕ ಜೋನಲ್ ಇಂಜಿನಿಯರ್ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಜಾಗದಲ್ಲಿ ತಂತಿ ಗೋಡೆಯನ್ನು ಅಳವಡಿಸಲು ಸರ್ವೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಇಂಜಿಯರ್ ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದಾರೆ.