ಅನಾರೋಗ್ಯದಿಂದ ಆಸ್ಪತ್ರೆಗೆ ಹೋದ ರೈತಗೆ ಪ್ರೆಗ್ನೆಂಟ್ ಎಂದು ವರದಿ
ಮೂತ್ರ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದ ರೈತಗೆ ಆಸ್ಪತ್ರೆಗೆ ನೀಡಿದ ವರದಿಯು ಬಿಗ್ ಶಾಕ್ ನೀಡಿದೆ.
ಗೋಲಘಾಟ್ : ಅನಾರೋಗ್ಯದಿಂದ ಮೂತ್ರ ಪರೀಕ್ಷೆಗೆ ಒಳಗಾದ ರೈತ ನೋರ್ವ ಗರ್ಭ ಧರಿಸಿದ್ದಾರೆ ಎಂಬುದಾಗಿ ವೈದ್ಯಕೀಯ ವರದಿ ನೀಡಿದ ವಿಚಿತ್ರ ಘಟನೆ ಅಸ್ಸಾಂ ರಾಜ್ಯದ ಗೋಲಘಾಟ್ ಎಂಬಲ್ಲಿ ನಡೆದಿದೆ.
ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ರೈತ ಜೋಗೇಶ್ವರ್ ಬೋರಾ(42 ) ಎಂಬ ರೈತ, ಸಿಎಂ ಅವರ ಉಚಿತ ಪರೀಕ್ಷೆ ಸೇವೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂತ್ರ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಬೋರಾ ಗರ್ಭ ಧರಿಸಿದ್ದಾರೆ ಎಂದು ವರದಿ ನೀಡಲಾಗಿತ್ತು.
ಇದನ್ನು ಮೆಡಿಕಲ್ ಮಾಲೀಕರಿಗೆ ತೋರಿಸುವ ಮುನ್ನ, ಈ ವರದಿಯಲ್ಲಿ ಏನಿದೆ ಎಂಬುದೇ ಗೊತ್ತಿರಲಿಲ್ಲ. ಬಳಿಕ ಮೆಡಿಕಲ್ ಮಾಲೀಕನವರಿಂದ ತಿಳಿದುಕೊಂಡೆ. ಕೊನೆಗೆ ಖಾಸಗಿ ಆಸ್ಪತ್ರೆಯಿಂದ ಈ ವರದಿ ದೋಷ ಪೂರಿತ ಎಂದು ತಿಳಿಯಿತು ಎಂದಿದ್ದಾರೆ ಬೋರಾ.