ಮುಸುಕುಧಾರಿ ಸಶಸ್ತ್ರ ವ್ಯಕ್ತಿಗಳು ಇಲ್ಲಿನ ಬ್ಯಾಂಕೊಂದಕ್ಕೆ ನುಗ್ಗಿ ನಿಷೇಧಿತ 500 ಹಾಗೂ 1000 ನೋಟುಗಳಿರುವ 13 ಲಕ್ಷ ರೂ.ಮೌಲ್ಯದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಶ್ರೀನಗರ (ನ.21): ಮುಸುಕುಧಾರಿ ಸಶಸ್ತ್ರ ವ್ಯಕ್ತಿಗಳು ಇಲ್ಲಿನ ಬ್ಯಾಂಕೊಂದಕ್ಕೆ ನುಗ್ಗಿ ನಿಷೇಧಿತ 500 ಹಾಗೂ 1000 ನೋಟುಗಳಿರುವ 13 ಲಕ್ಷ ರೂಮೌಲ್ಯದ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶ್ರೀನಗರದಿಂದ 100 ಕಿಮೀ ದೂರದಲ್ಲಿರುವ ಮಲ್ಪೋರದ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಈ ದರೋಡೆ ನಡೆದಿದೆ. ಉಗ್ರವಾದಿಗಳೇ ಈ ಕೆಲಸ ಮಾಡಿರಬಹುದು ಎಂದು ಪೋಲಿಸ್ ಮೂಲಗಳು ಸಂಶಯಿಸಿದೆ.

ದರೋಡೆ ನಡೆದ ಸಂದರ್ಭದಲ್ಲಿ ಬ್ಯಾಂಕಿನಲ್ಲಿ 12 ಮಂದಿ ಕೆಲಸ ಮಾಡುತ್ತಿದ್ದು ಯಾರೊಬ್ಬರಿಗೂ ಹಾನಿಯಾಗಿಲ್ಲ. ಈ ಸಮಯದಲ್ಲಿ ಭ್ಯಾಂಕಿನ ಭದ್ರತಾ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿದ್ದವೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.