ಬಿಎಸ್’ವೈ ಅವಿಶ್ರಾಂತ ಚೇತನ –ರೈತ ಪರ ನಾಯಕ : ಅನಂತ್ ಕುಮಾರ್
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಅನಂತ್ ಕುಮಾರ್ ಅವರುಗಳು ರಾಜ್ಯ ಬಿಜೆಪಿಯ ಅಗ್ರ ಪಂಕ್ತಿಯ ನಾಯಕರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವರಿಗೀಗ 75ರ ಹರೆಯ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ತಾವಿಬ್ಬರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಬಗೆ, ಯಡಿಯೂರಪ್ಪ ಅವರೊಂದಿಗಿನ ಒಡನಾಟ, ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಂತಿದೆ.
ಬಿಎಸ್’ವೈ ಅವಿಶ್ರಾಂತ ಚೇತನ –ರೈತ ಪರ ನಾಯಕ : ಅನಂತ್ ಕುಮಾರ್
ಬೆಂಗಳೂರು : ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ರಸಗೊಬ್ಬರ ಖಾತೆ ಅನಂತ್ ಕುಮಾರ್ ಅವರುಗಳು ರಾಜ್ಯ ಬಿಜೆಪಿಯ ಅಗ್ರ ಪಂಕ್ತಿಯ ನಾಯಕರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಯಡಿಯೂರಪ್ಪ ಅವರಿಗೀಗ 75ರ ಹರೆಯ. ಈ ಸಂದರ್ಭದಲ್ಲಿ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಕಳೆದ ಮೂರು ದಶಕಗಳಲ್ಲಿ ತಾವಿಬ್ಬರು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಬಗೆ, ಯಡಿಯೂರಪ್ಪ ಅವರೊಂದಿಗಿನ ಒಡನಾಟ, ಹೋರಾಟದ ಹಾದಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಂತಿದೆ.
ಅನಂತಕುಮಾರ್ ಮತ್ತು ಯಡಿಯೂರಪ್ಪ ಬಿಜೆಪಿಯ ಹಕ್ಕ-ಬುಕ್ಕ ಅಂತಾರೆ. ನೀವು ಕರ್ನಾಟಕ ಬಿಜೆಪಿಯ ಅವಳಿ-ಜವಳಿ. ಇಂದು ಯಡಿಯೂರಪ್ಪನವರಿಗೆ 75ನೇ ಹುಟ್ಟುಹಬ್ಬ. ಹೇಗಿತ್ತು ಬಿಜೆಪಿ ಕಟ್ಟುವ ಆ ದಿನಗಳು?
ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕ-ಬುಕ್ಕ ಕಡು ಬಡತನ ಹಿನ್ನೆಲೆಯಿಂದ ಬಂದ, ಕಾಡಿನಲ್ಲಿ ದನ ಕಾಯಿಸುತ್ತಾ ಬೆಳೆದ ಬಾಲಕರು. ಆ ಇಬ್ಬರಿಗೆ ಆಚಾರ್ಯ ವಿದ್ಯಾರಣ್ಯರು ತರಬೇತಿ ನೀಡಿ ನಾಯಕರನ್ನಾಗಿ ರೂಪಿಸುತ್ತಾರೆ. ಮುಂದೆ ಆ ಇಬ್ಬರು ಬಾಲಕರೇ ವಿಜಯನಗರ ಸಾಮ್ರಾಜ್ಯ ಕಟ್ಟುತ್ತಾರೆ. ಹಾಗಂತ ಆ ಕಥೆಗೆ ನಮ್ಮನ್ನು ಹೋಲಿಸುವುದು ಬೇಡ. ನಾವು ಅಷ್ಟುಮಹಾನ್ ಅಲ್ಲ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಕಟ್ಟಲು ನಾವು ಜೋಡೆತ್ತುಗಳಂತೆ ದುಡಿದಿದ್ದೇವೆ. ಯಡಿಯೂರಪ್ಪನವರಂಥ ಜನನಾಯಕನ ಜೊತೆ ಸೇರಿ ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದದ್ದು ಈಗಲೂ ನನಗೆ ಹೆಮ್ಮೆಯ ವಿಷಯ. 1987ರಲ್ಲಿ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿ ಅಧ್ಯಕ್ಷರು. ಅದೇ ಇಸ್ವಿಯಲ್ಲಿ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನನ್ನನ್ನು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಆಗ ನಮ್ಮ ಪಕ್ಷದ ಒಟ್ಟಾರೆ ಮತ ಗಳಿಕೆ ಪ್ರಮಾಣ ಇದ್ದದ್ದು ಶೇ. 2.6 ಮಾತ್ರ. ಆ ಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಮಾತ್ರ ಗೆದ್ದಿದ್ದರು. ಆ ಪೈಕಿ ವಸಂತ ಬಂಗೇರಾ ಪಕ್ಷ ತ್ಯಜಿಸಿದ್ದರು. ಉಳಿದ ಇನ್ನೊಬ್ಬ ಶಾಸಕರೇ ಯಡಿಯೂರಪ್ಪ. ಅಲ್ಲಿಂದ ಆರಂಭವಾದ ನಮ್ಮ ದುಡಿತ ಈಗಲೂ ಮುಂದುವರಿದಿದೆ. ನನ್ನ ಸಹವರ್ತಿ ಹಾಗೂ ಜನನಾಯಕ ಯಡಿಯೂರಪ್ಪನವರಿಗೆ 75ನೇ ಹುಟ್ಟುಹಬ್ಬದ ಶುಭಾಶಯಗಳು.
ನಿಮ್ಮ ಈ ಮೂರು ದಶಕಗಳ ಹಾದಿ ಹೇಗಿತ್ತು?
1987ರಲ್ಲಿ ರಾಜ್ಯಕ್ಕೆ ಬಂದ ನಾನು ಹಾಗೂ ರಾಜ್ಯಾಧ್ಯಕ್ಷರಾಗಿದ್ದ ಯಡಿಯೂರಪ್ಪ ಪುನಃಶ್ಚ ಹರಿವೋಂ ಅಂತ ಕೆಲಸ ಶುರು ಮಾಡಿದೆವು. (ಇದು ಸ್ವಾತಂತ್ರ ಸಂಗ್ರಾಮದ ವೇಳೆ ಮಂಡಾಲ ಜೈಲಿನಿಂದ ಹೊರ ಬಂದ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಬರೆದ ಮೊದಲ ಸಂಪಾದಕೀಯದ ಶೀರ್ಷಿಕೆ. ಇದರರ್ಥ ಮತ್ತೆ ಹೋರಾಟ ಆರಂಭ.) ಇದಾದ ನಂತರ 1991ರ ಲೋಕಸಭಾ ಚುನಾವಣೆಯಲ್ಲಿ ನಾವು ನಾಲ್ಕು ಲೋಕಸಭಾ ಸೀಟು ಗಳಿಸಿದೆವು ಹಾಗೂ ಪಕ್ಷದ ವೋಟ್ ಶೇರ್ 28.6ಕ್ಕೆ ಏರಿತ್ತು. ಅಂದರೆ, ಶೇ. 2.6 ಇದ್ದ ಬಿಜೆಪಿಯ ಮತಗಳಿಕೆ ಪ್ರಮಾಣ ನಾವಿಬ್ಬರು ಜತೆಗೂಡಿದ ಕೆಲವೇ ವರ್ಷದಲ್ಲಿ 28.6ಕ್ಕೇರಿತ್ತು. ಇದನ್ನು, ಅಂದು ಪ್ರಖ್ಯಾತ ಪತ್ರಕರ್ತ ಪ್ರಣಯ್ ರಾಯ್ ಅವರು, ದೇಶದ ಇತಿಹಾಸದ ಅತಿ ದೊಡ್ಡ ವೋಟ್ ಸ್ವಿಂಗ್ ಎಂದು ಬಣ್ಣಿಸಿದ್ದರು. ಅನಂತರ ನಾಗಾಲೋಟ ಆರಂಭವಾಯಿತು. 1994ರ ವಿಧಾನಸಭಾ ಚುನಾವಣೆಯಲ್ಲಿ 40 ಸೀಟು, 1996ರ ಲೋಕಸಭಾ ಚುನಾವಣೆಯಲ್ಲಿ ಆರು ಲೋಕಸಭಾ ಸ್ಥಾನ ದೊರಕಿತು. ಇನ್ನು 1998ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 13 ಸ್ಥಾನಗಳಿಸಿದರೆ, ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿಗೆ 3 ಸ್ಥಾನ ದೊರಕಿತ್ತು. ಇದಾದ ನಂತರ 1999ರ ವಿಧಾನಸಭಾ ಚುನಾವಣೆಯಲ್ಲಿ ನಾವು ಮಾಡಿಕೊಂಡ ತಪ್ಪು ಹೊಂದಾಣಿಕೆಯಿಂದಾಗಿ ನಷ್ಟಅನುಭವಿಸಿದೆವು. ಆಗಿನ ರಾಜಕೀಯ ಸ್ಥಿತಿಯಿಂದಾಗಿ ಬಿಜೆಪಿಯು ಜೆ.ಎಚ್.ಪಟೇಲರೊಂದಿಗೆ ಚುನಾವಣೆ ಎದುರಿಸಿತು. ಇದನ್ನು ಜನ ಒಪ್ಪಲಿಲ್ಲ. ಇದರ ಬದಲಾಗಿ ಆಗ ನಾವು ಏಕಾಂಗಿಯಾಗಿ ಚುನಾವಣೆಗೆ ಹೋಗಿದ್ದರೆ, ಆಗಲೇ ಅಧಿಕಾರಕ್ಕೆ ಬರುತ್ತಿದ್ದೆವು. ಆದರೆ, ಆ ರೀತಿ ಆಗಲಿಲ್ಲ. ಇದರಿಂದಾಗಿ ಬಿಜೆಪಿ 44 ಎಂಎಲ್ಎ ಸೀಟು ಹಾಗೂ 7 ಲೋಕಸಭಾ ಸೀಟು ಸಿಕ್ಕಿತ್ತು. 2003ರಲ್ಲಿ ನಾನು ಪಕ್ಷದ ಅಧ್ಯಕ್ಷನಾದೆ. ಆಗ ಯಡಿಯೂರಪ್ಪ ಅವರು ಪ್ರಚಾರ ಸಮಿತಿ ಅಧ್ಯಕ್ಷರಾದರು. ಅವಿರತ ಶ್ರಮಿಸಿದೆವು. ಪರಿಣಾಮವಾಗಿ ನಾವು 79 ಸೀಟು ಪಡೆದವು ಹಾಗೂ 18 ಲೋಕಸಭಾ ಸೀಟು ದೊರಕಿತ್ತು. ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು. ದಕ್ಷಿಣ ಭಾರತದಲ್ಲಿ ಬಿಜೆಪಿ ಮೊತ್ತಮೊದಲ ಬಾರಿಗೆ ಅಧಿಕಾರಕ್ಕೆ ಬಂತು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ಸಿಎಂ ಪರಿಪೂರ್ಣ ಸಿಎಂ ಆದದ್ದು, ಕರ್ನಾಟಕದಲ್ಲಿ ಬಿಜೆಪಿ ಭದ್ರವಾಗಿ ನೆಲೆ ಊರಿದ್ದು ಎಲ್ಲ ಈಗ ಇತಿಹಾಸ.
ಕೇವಲ ಎರಡು ಸ್ಥಾನದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ನಡೆಸಿದ ಕಾರ್ಯಾಚರಣೆ ಹೇಗಿತ್ತು?
ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿಗೆ ರೈತ ಹೋರಾಟದ ಹರವನ್ನು ದೊರಕಿಸಿಕೊಟ್ಟರು. 1987ರಲ್ಲಿ ಬಿಜೆಪಿಯು ಮೂರು ನಿಟ್ಟಿನ ರಣನೀತಿ ಹೊಂದಿತ್ತು - ರೈತ, ರಾಮ ಮಂದಿರ ಹಾಗೂ ರಾಷ್ಟ್ರಧ್ವಜ. ಯಡಿಯೂರಪ್ಪ ಬಗರ್ಹುಕುಂ ಸಾಗುವಳಿದಾರರ ಕಾಯಂ ಹೋರಾಟ, ಸಾಲ ಮನ್ನಾ, ರೈತರ ಬೆಳೆಗೆ ಯೋಗ್ಯ ಬೆಲೆ ದೊರಕಿಕೊಡುವ ಹೋರಾಟಗಳನ್ನು ನಡೆಸುತ್ತಾ ಬಂದರು. ಈ ಹೋರಾಟಗಳು, ಮುಂದೆ ಅವರು ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಆದಾಗ ಶೂನ್ಯ ಬಡ್ಡಿದರದ ಸಾಲ, ರೈತ ಬಜೆಟ್ ನೀಡಲು ಪ್ರೇರಣೆಯಾಗಿತ್ತು. ಇದರ ಜತೆಯಲ್ಲಿ ಇಡೀ ದೇಶದಲ್ಲಿ ರಾಮಮಂದಿರದ ಹೋರಾಟ ನಡೆಯುತ್ತಿತ್ತು. ಅದು ಕರ್ನಾಟಕದಲ್ಲಿ ವ್ಯಾಪಕವಾಗಿತ್ತು. ಅನಂತರ ಮೊಯ್ಲಿ ಸರ್ಕಾರದ ಅವಧಿಯಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ವಿಚಾರ ಬಂತು. ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಮೂರು ಲೋಕಸಭಾ ಸೀಟು ಗೆದ್ದಿತ್ತು. ಆ ಹೋರಾಟದ ಮುಂಚೂಣಿಯಲ್ಲಿ ಯಡಿಯೂರಪ್ಪ ಇದ್ದರು. ನಾನು ಸಂಘಟನೆ, ಹೋರಾಟದ ರಣನೀತಿ, ಸಾಹಿತ್ಯ ಮೊದಲಾದ ಎಲ್ಲಾ ಸಂಗತಿಗಳನ್ನು ನೋಡುತ್ತಿದ್ದೆ. ಹೀಗೆ ಇನ್ನೂ ಅನೇಕ ನಾಯಕರ ಸಂಘಟಿತ ಹೋರಾಟದಿಂದ ಪಕ್ಷ ರಾಜ್ಯದಲ್ಲಿ ಭದ್ರ ಬುನಾದಿ ದೊರಕಲು ಹಾಗೂ ಪಕ್ಷ ಬಲಶಾಲಿಯಾಗಿ ಬೆಳೆಯಲು ಕಾರಣವಾಯಿತು.
ಯಡಿಯೂರಪ್ಪ ಅಂದರೆ...?
ಯಡಿಯೂರಪ್ಪ ಎಂದರೆ ಅವಿಶ್ರಾಂತ ಚೇತನ. ಹಗಲಿರುಳು ಕೆಲಸ ಮಾಡುವ ನಾಯಕ. ರೈತರು, ಕೃಷಿ ಕಾರ್ಮಿಕರು, ಬಡವರು, ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿ ಹೊಂದಿರುವ ನಾಯಕ. ಇವು ಅವರ ಎಲ್ಲಾ ಮುಂಗಡಪತ್ರ ಹಾಗೂ ಯೋಜನೆಗಳಲ್ಲಿ ಕಂಡು ಬರುತ್ತವೆ. ಹೀಗಾಗಿಯೇ ಅವರು ರಾಜ್ಯದ ಬಹುದೊಡ್ಡ ಜನನಾಯಕನಾಗಿ ಬೆಳೆದರು. ಈಗಲೂ ನೋಡಿ, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಖುದ್ದು ಪ್ರವಾಸ ತೆರಳಿ, ಸಭೆ, ಸಂವಾದ ನಡೆಸಿದವರು ಯಡಿಯೂರಪ್ಪ. ನನ್ನ ಪ್ರಕಾರ ಈ ರೀತಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದ ಏಕೈಕ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ಮಾತ್ರ. ಇದು ಅವರ ಸಾಹಸ, ಪರಿಶ್ರಮ ಹಾಗೂ ಛಲವನ್ನು ತೋರಿಸುತ್ತದೆ. ಇದು ಯಡಿಯೂರಪ್ಪ ಅವರ ವಿಶೇಷ ಗುಣ. ಯಡಿಯೂರಪ್ಪ ಓರ್ವ ದಣಿವರಿಯದ ಶಕ್ತಿ.
ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ... ಮೂವರೂ ಕರ್ನಾಟಕ ಯಾತ್ರೆ ಮಾಡಿದ್ದಾರಲ್ಲ?
ಯಡಿಯೂರಪ್ಪ ಅವರ ನೇತೃತ್ವವನ್ನು ಇಡೀ ಕರ್ನಾಟಕದ ಜನ ಸ್ವಾಗತಿಸಿದ್ದಾರೆ. ತಮ್ಮ ಈ ಇಳಿ ವಯಸ್ಸಿನಲ್ಲಿ ಕೂಡ ಈ ರೀತಿ ದಣಿವರಿಯದೇ ಓಡಾಡುತ್ತಿದ್ದಾರಲ್ಲ, ಜನರನ್ನು ಸಂಪರ್ಕಿಸುತ್ತಿದ್ದಾರಲ್ಲ. ಅದನ್ನ ಜನ ಗಮನಿಸಿದ್ದಾರೆ. ಈ ಯಾತ್ರೆಗೆ ಇತರ ಯಾತ್ರೆಗಳನ್ನು ಹೋಲಿಸಿ ನೋಡಿ. ಕುಮಾರಸ್ವಾಮಿ ಅವರ ಯಾತ್ರೆ ಪಾಪ... ಆರಂಭದಲ್ಲೇ ಪಂಕ್ಚರ್ ಆಗಿತ್ತು. ಇನ್ನು ಸಿದ್ದರಾಮಯ್ಯ ಅವರ ಪ್ರವಾಸ ಆರಂಭದ ಒಂದು ತಿಂಗಳು ನೆನೆಗುದಿಗೆ ಬಿದ್ದಿತ್ತು. ಯಾರು ಎಲ್ಲಿಗೆ ಪ್ರವಾಸ ಮಾಡಬೇಕು. ಪರಮೇಶ್ವರ್ ಎಲ್ಲಿಗೆ ಹೋಗಬೇಕು. ಸಿದ್ದರಾಮಯ್ಯ ಎಲ್ಲಿ ಪ್ರವಾಸ ಮಾಡಬೇಕು ಎಂಬುದನ್ನು ನಿರ್ಧರಿಸಲಾಗದೇ ಗೊಂದಲದಲ್ಲಿತ್ತು. ಅಂತಿಮವಾಗಿ ಅದು ಸರ್ಕಾರಿ ಜಾತ್ರೆಯಾಗಿ ಸಂಪನ್ನವಾಯಿತು. ಹಾಗೆ ನೋಡಿದರೆ, ಜನರ ಪ್ರತಿಕ್ರಿಯೆಯೊಂದಿಗೆ ಯಶಸ್ವಿ ಯಾತ್ರೆ ನಡೆಸಿದ್ದು ಯಡಿಯೂರಪ್ಪ ಮಾತ್ರ.
ಇತ್ತೀಚೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಿ ಚುನಾವಣೆಗೆ ಹೋಗುವುದನ್ನು ಬಿಜೆಪಿ ನಿಲ್ಲಿಸಿದೆ. ಆದರ, ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗಿದೆ?
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿರುವುದು ನೂರಕ್ಕೆ ನೂರರಷ್ಟುಲಾಭವನ್ನು ಪಕ್ಷಕ್ಕೆ ತಂದುಕೊಡುತ್ತದೆ. ಏಕೆಂದರೆ, ರೈತರ ಪರ, ಜನರ ಪರ ದಿಟ್ಟನಿರ್ಧಾರಗಳನ್ನು ಕೈಗೊಂಡ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಅವರು ಹಣಕಾಸು ಸಚಿವ ಹಾಗೂ ಮುಖ್ಯಮಂತ್ರಿಯಾಗುವವರೆಗೂ ಕರ್ನಾಟಕದ ಯಾವೊಬ್ಬ ಮುಖ್ಯಮಂತ್ರಿಯೂ ರೈತರ ಸಾಲ ಮನ್ನಾ ಮಾಡುವ ದಿಟ್ಟನಿರ್ಧಾರವನ್ನು ಕೈಗೊಳ್ಳಲಿಲ್ಲ. ಅದಕ್ಕೂ ಮೊದಲು ರೈತರು ಶೇ. 14, ಶೇ. 16ರ ಬಡ್ಡಿದರದಲ್ಲಿ ಸಾಲ ಪಡೆಯುತ್ತಿದ್ದರು. ಇದನ್ನು ಶೂನ್ಯ ಬಡ್ಡಿದರದ ಸಾಲ ಮಾಡಿದ ಶ್ರೇಯಸ್ಸು ಯಡಿಯೂರಪ್ಪ ಅವರದ್ದು. ಯಡಿಯೂರಪ್ಪ ಅವರ ಈ ನಿರ್ಧಾರದಿಂದ ಪ್ರೇರಣೆ ಪಡೆದು ಭಾರತದ ಇನ್ನೂ ಹಲವು ರಾಜ್ಯಗಳಲ್ಲೂ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುವ ಕಾರ್ಯಕ್ರಮ ಜಾರಿಗೆ ಬಂದಿವೆ. ಇವತ್ತು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 3780 ಮಂದಿ ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಚಿವರೇ ವಿಧಾನಸಭೆಯಲ್ಲಿ ಹೇಳಿರುವ ಪ್ರಕಾರ ಮೀಟರ್ ಬಡ್ಡಿಯಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ರೈತರ ಬಜೆಟ್, ಭಾಗ್ಯಲಕ್ಷ್ಮೇ, ಸೈಕಲ್ ಯೋಜನೆ, ಬೆಂಬಲ ಬೆಲೆ, ಸಂಧ್ಯಾಸುರಕ್ಷಾದಂತಹ ಜನ ಪರ ಯೋಜನೆ ಕೊಟ್ಟವರು ಯಡಿಯೂರಪ್ಪ ಎಂಬುದು ಜನಜನಿತ. ಹೀಗಾಗಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತಿರುವುದರಿಂದ ರಾಜ್ಯದ ಜನತೆ ಬಿಜೆಪಿಯು ಜನಪರ, ರೈತಪರ ಹಾಗೂ ಬಡವರ ಪರ ಪಕ್ಷ ಎಂದು ಗುರುತಿಸಿದ್ದಾರೆ. ಇದರಿಂದ ಪಕ್ಷಕ್ಕೆ ನೆರವಾಗಲಿದೆ.
ಮೋದಿ, ಶಾ ಇಲ್ಲದೆ ಗೆಲ್ಲಲು ಅಸಾಧ್ಯವೇ?
ಯಡಿಯೂರಪ್ಪ, ಸಿದ್ದರಾಮಯ್ಯ, ಕುಮಾರಸ್ವಾಮಿ... ಮೂವರೂ ಕರ್ನಾಟಕ ಯಾತ್ರೆ ಮಾಡಿದ್ದಾರಲ್ಲ?
ಅವರು ನಮ್ಮ ದೊಡ್ಡ ಶಕ್ತಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅವರ ಮಾರ್ಗದರ್ಶನ, ನಾಯಕತ್ವದಲ್ಲೇ ನಾವು 19 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದರಂತೆಯೇ, ಅವರು ರಾಜ್ಯಕ್ಕೆ ಬರುವುದಕ್ಕಿಂತ ಮೊದಲೇ 86 ದಿನದ ಪರಿವರ್ತನಾ ಯಾತ್ರೆಯನ್ನು ರಾಜ್ಯ ನಾಯಕರೇ ಕೈಗೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50ರಿಂದ 60 ಸಾವಿರ ಜನರ ರಾರಯಲಿಗಳು ನಡೆದಿವೆ. ಕಾಂಗ್ರೆಸ್ ಶೂನ್ಯ ಪ್ಲಸ್ ಶೂನ್ಯ ಇಕ್ವಲ್ಸ್ ಶೂನ್ಯ ಅರ್ಥಾತ್ ಸಿದ್ದರಾಮಯ್ಯ ಪ್ಲಸ್ ರಾಹುಲ್ ಗಾಂಧಿ ಇಕ್ವಲ್ಸ್ ಶೂನ್ಯ. ಆದರೆ, ನರೇಂದ್ರ ಮೋದಿ, ಅಮಿತ್ ಶಾ ಪ್ಲಸ್ ಯಡಿಯೂರಪ್ಪ ಅಂದರೆ ತ್ರಿಬಲ್ ಶಕ್ತಿ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಕೇಂದ್ರದಲ್ಲಿ ಮೋದಿ ಅವರಿದ್ದರೆ ಕರ್ನಾಟಕ ಮುನ್ನಡೆ ಹಾಗೂ ಪ್ರಗತಿ ಕಾಣಲು ಸಾಧ್ಯ ಎಂದು ಕರ್ನಾಟಕದ ಜನತೆ ನಂಬಿದ್ದಾರೆ. ಏಕೆಂದರೆ, ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಕಳೆದ ಮೂರುವರೆ ವರ್ಷ ಆಡಳಿತದ ಬಗ್ಗೆ ಜನರ ಬೆಂಬಲವಿದೆ. ಅದು ಇಲ್ಲದಿದ್ದರೆ ಇತಿಹಾಸದಲ್ಲೇ ಅತಿ ಹೆಚ್ಚು ರಾಜ್ಯಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಬಂದರೆ ಕರ್ನಾಟಕದ ಅಭ್ಯುದಯದ ಬಾಗಿಲು ತೆರೆಯುತ್ತದೆ ಎಂಬ ಭರವಸೆ ರಾಜ್ಯದ ಜನತೆಗೆ ಇದೆ.
ಮೋದಿ ಸರ್ಕಾರ ವೈಫಲ್ಯ ಕಂಡಿದೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸುತ್ತದೆ?
ಕೇಂದ್ರ ಸರ್ಕಾರ ನೋಟ್ ಅಮಾನ್ಯೀಕರಣ ಮಾಡಿತು. ಇದಾದ ನಂತರ ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ಮಾಡಿತು. ಅದು ಈಗ ಧ್ವಂಸಗೊಂಡಿದೆ. ಇತ್ತೀಚಿನ ಮುಂಗಡಪತ್ರದಲ್ಲಿ 50 ಕೋಟಿ ಬಡಜನತೆಗೆ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ನೀಡುವ ಕಾರ್ಯಕ್ರಮ ಆರಂಭವಾಯಿತು. ಭಾರತ ಸ್ವತಂತ್ರಗೊಂಡು 70 ವರ್ಷವಾದರೂ ಇದುವರೆಗಿನ ಯಾವ ಸರ್ಕಾರವೂ ರೈತರು ಬೆಳೆಯುವ ಬೆಳೆಗೆ ತಗಲುವ ವೆಚ್ಚದ ಒಂದೂವರೆ ಪಟ್ಟಿನಷ್ಟುಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿರಲಿಲ್ಲ. ಮೋದಿ ಸರ್ಕಾರ ಆ ದಿಸೆಯಲ್ಲಿ ಹೆಜ್ಜೆ ಹಾಕಿದೆ. ಮುದ್ರಾ ಯೋಜನೆಯಿಂದ ಹತ್ತು ಕೋಟಿ ಯುವಕರಿಗೆ ಲಾಭವಾಗಿದೆ. ಜನಧನ್, ಜೀವನಜ್ಯೋತಿ, ಜೀವನಸುರಕ್ಷಾ... ಎಷ್ಟುಯೋಜನೆಗಳು ಬಂದಿವೆ. ಇಂತಹ ಒಂದೂ ಯೋಜನೆಯನ್ನೂ ರಾಹುಲ್ ಗಾಂಧಿ ಆಗಲಿ ಅಥವಾ ಅವರ ಪೂರ್ವಿಕರಾಗಲಿ ಮಾಡಿದ್ದಾರೆ ಎಂದು ಹೇಳಲಿ ನೋಡೋಣ. ಗರೀಬಿ ಹಟಾವೋ ಎಂದು ಘೋಷಣೆ ಹೇಳಿದ್ದು ಬಿಟ್ಟರೆ, ರಾಷ್ಟ್ರೀಯ ಮಟ್ಟದ ಒಂದು ಯೋಜನೆಯನ್ನೂ ಅವರು ಮಾಡಲು ಆಗಲಿಲ್ಲ. ಉದಾಹರಣೆಗೆ ನನ್ನ ಖಾತೆಯನ್ನೇ ತೆಗೆದುಕೊಳ್ಳೋಣ. ಕಾಂಗ್ರೆಸ್ ಸರ್ಕಾರವಿದ್ದಾಗ 1.5 ಲಕ್ಷ ರು. ಆಗಿತ್ತು ಹೃದಯ ಚಿಕಿತ್ಸೆಯ ಸ್ಟೆಂಟ್ನ ಬೆಲೆ. ಈಗ ಅದು 28 ಸಾವಿರ ರು. ಆಗಿದೆ. ಆರು ಕೋಟಿ ಜನ ಹೃದ್ರೋಗಿಗಳಿದ್ದಾರೆ. 6 ಲಕ್ಷ ಸರ್ಜರಿ ಪ್ರತಿ ವರ್ಷ ಆಗುತ್ತೆ. 6 ಸಾವಿರ ಕೋಟಿ ರು. ಉಳಿತಾಯ ಆಗುತ್ತದೆ. ಮಂಡಿ ಟ್ರಾನ್ಸ್ಪ್ಲಾಂಟ್ ಬೆಲೆ ಒಂದೂವರೆ ಲಕ್ಷ ರು. ನಿಂದ ಎಂಟೂವರೆ ಲಕ್ಷ ರು. ಆಗುತ್ತಿತ್ತು. ಈಗ ಕೇವಲ 50 ಸಾವಿರ ರು.ಗೆ ಮಿತಿ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಸರ್ಕಾರವಿದ್ದಾಗ 99 ಜನೌಷಧಿ ಕೇಂದ್ರವಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ 555 ಜಿಲ್ಲೆಗಳಲ್ಲಿ 3175 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ.
ಮೋದಿ ಕಾರ್ಯಕ್ರಮಗಳಿಂದಾಗಿ ನೀವು ಗೆದ್ದುಬಿಡುತ್ತೀರಿ ಎಂಬಷ್ಟುಸುಲಭವೇ ಕರ್ನಾಟಕ ಚುನಾವಣೆ?
ಮೋದಿಯವರ ಕಾರ್ಯಕ್ರಮ ಎಷ್ಟುಪ್ರಮುಖವೋ, ಚುನಾವಣೆ ನಡೆಸುವ ಅಮಿತ್ ಶಾ ಅವರ ಕಾರ್ಯತಂತ್ರ ಕೂಡ ಅಷ್ಟೇ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅಮಿತ್ ಶಾ ಅವರು ಕೇವಲ ಚುನಾವಣೆ ಕಾರ್ಯತಂತ್ರ ರೂಪಿಸುವುದು ಮಾತ್ರವಲ್ಲ ಅವರು ಪಕ್ಷವನ್ನು ಅತ್ಯಂತ ಪ್ರಬಲವಾಗಿ ಬೇಳೆಸಿದ್ದಾರೆ ಮತ್ತು ತಳಮಟ್ಟದಲ್ಲಿ ಅತ್ಯಂತ ಭದ್ರವಾಗಿಸಿದ್ದಾರೆ. ದೇಶದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೊಡುಗೆ ಅತ್ಯಂತ ನಿರ್ಣಾಯಕ. 11 ಕೋಟಿ ಸದಸ್ಯರನ್ನು ಹೊಂದಿದ ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆಸಿದ್ದು ಅವರು. ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಅಮಿತ್ ಶಾ ತೋರಿದ ಚಾಣಾಕ್ಷತೆ, ರಣನೀತಿಯೇ ಮುಖ್ಯ ಕಾರಣ. ಅಮಿತ್ ಶಾ ಅವರು ಹಾಕಿದ ಅಡಿಪಾಯದ ಮೇಲೆ ಬಿಜೆಪಿಯು ದೇಶಾದ್ಯಂತ ಬೆಳೆಯುತ್ತಿದೆ. ಹಾಗಾಗಿ, ಮೋದಿಯವರ ನಾಯಕತ್ವ, ಅಮಿತ್ ಶಾ ಅವರ ರಣನೀತಿ ಹಾಗೂ ರಾಜ್ಯಾದ್ಯಂತ ಯಡಿಯೂರಪ್ಪವರ ಜನಪ್ರಿಯತೆ ನಮ್ಮನ್ನು ಈ ಬಾರಿ ಗೆಲ್ಲಿಸುತ್ತದೆ ಎಂಬ ವಿಶ್ವಾಸ ನಮಗಿದೆ.
ಮೋದಿ, ಶಾ ಇಲ್ಲದೆ ಗೆಲ್ಲಲು ಅಸಾಧ್ಯವೇ?
ರಾಜ್ಯಬಿಜೆಪಿ ಈ ಬಾರಿ ಚುನಾವಣೆಗೆ ಮೋದಿ ಹಾಗೂ ಅಮಿತ್ ಶಾ ಅವರನ್ನೇ ಹೆಚ್ಚು ಅವಲಂಬಿಸಿದೆ?
ಅವರು ನಮ್ಮ ದೊಡ್ಡ ಶಕ್ತಿ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಅವರ ಮಾರ್ಗದರ್ಶನ, ನಾಯಕತ್ವದಲ್ಲೇ ನಾವು 19 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೇವೆ. ಅದರಂತೆಯೇ, ಅವರು ರಾಜ್ಯಕ್ಕೆ ಬರುವುದಕ್ಕಿಂತ ಮೊದಲೇ 86 ದಿನದ ಪರಿವರ್ತನಾ ಯಾತ್ರೆಯನ್ನು ರಾಜ್ಯ ನಾಯಕರೇ ಕೈಗೊಂಡಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 50ರಿಂದ 60 ಸಾವಿರ ಜನರ ರಾರಯಲಿಗಳು ನಡೆದಿವೆ. ಕಾಂಗ್ರೆಸ್ ಶೂನ್ಯ ಪ್ಲಸ್ ಶೂನ್ಯ ಇಕ್ವಲ್ಸ್ ಶೂನ್ಯ ಅರ್ಥಾತ್ ಸಿದ್ದರಾಮಯ್ಯ ಪ್ಲಸ್ ರಾಹುಲ್ ಗಾಂಧಿ ಇಕ್ವಲ್ಸ್ ಶೂನ್ಯ. ಆದರೆ, ನರೇಂದ್ರ ಮೋದಿ, ಅಮಿತ್ ಶಾ ಪ್ಲಸ್ ಯಡಿಯೂರಪ್ಪ ಅಂದರೆ ತ್ರಿಬಲ್ ಶಕ್ತಿ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಕೇಂದ್ರದಲ್ಲಿ ಮೋದಿ ಅವರಿದ್ದರೆ ಕರ್ನಾಟಕ ಮುನ್ನಡೆ ಹಾಗೂ ಪ್ರಗತಿ ಕಾಣಲು ಸಾಧ್ಯ ಎಂದು ಕರ್ನಾಟಕದ ಜನತೆ ನಂಬಿದ್ದಾರೆ. ಏಕೆಂದರೆ, ಕೇಂದ್ರದಲ್ಲಿ ಮೋದಿ ಸರ್ಕಾರವಿದೆ. ಕಳೆದ ಮೂರುವರೆ ವರ್ಷ ಆಡಳಿತದ ಬಗ್ಗೆ ಜನರ ಬೆಂಬಲವಿದೆ. ಅದು ಇಲ್ಲದಿದ್ದರೆ ಇತಿಹಾಸದಲ್ಲೇ ಅತಿ ಹೆಚ್ಚು ರಾಜ್ಯಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡಲು ಆಗುತ್ತಿರಲಿಲ್ಲ. ಹೀಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ಸರ್ಕಾರ ಬಂದರೆ ಕರ್ನಾಟಕದ ಅಭ್ಯುದಯದ ಬಾಗಿಲು ತೆರೆಯುತ್ತದೆ ಎಂಬ ಭರವಸೆ ರಾಜ್ಯದ ಜನತೆಗೆ ಇದೆ.
ಮೋದಿ ಸರ್ಕಾರ ವೈಫಲ್ಯ ಕಂಡಿದೆ ಎಂದು ಕಾಂಗ್ರೆಸ್ ನಾಯಕತ್ವ ಆರೋಪಿಸುತ್ತದೆ?
ಕೇಂದ್ರ ಸರ್ಕಾರ ನೋಟ್ ಅಮಾನ್ಯೀಕರಣ ಮಾಡಿತು. ಇದಾದ ನಂತರ ಕಾಂಗ್ರೆಸ್ ಈ ಬಗ್ಗೆ ಅಪಪ್ರಚಾರ ಮಾಡಿತು. ಅದು ಈಗ ಧ್ವಂಸಗೊಂಡಿದೆ. ಇತ್ತೀಚಿನ ಮುಂಗಡಪತ್ರದಲ್ಲಿ 50 ಕೋಟಿ ಬಡಜನತೆಗೆ ಆಯುಷ್ಮಾನ್ ಭಾರತ ಎಂಬ ಆರೋಗ್ಯ ವಿಮೆ ನೀಡುವ ಕಾರ್ಯಕ್ರಮ ಆರಂಭವಾಯಿತು. ಭಾರತ ಸ್ವತಂತ್ರಗೊಂಡು 70 ವರ್ಷವಾದರೂ ಇದುವರೆಗಿನ ಯಾವ ಸರ್ಕಾರವೂ ರೈತರು ಬೆಳೆಯುವ ಬೆಳೆಗೆ ತಗಲುವ ವೆಚ್ಚದ ಒಂದೂವರೆ ಪಟ್ಟಿನಷ್ಟುಬೆಂಬಲ ಬೆಲೆ ನೀಡುತ್ತೇವೆ ಎಂದು ಹೇಳಿರಲಿಲ್ಲ. ಮೋದಿ ಸರ್ಕಾರ ಆ ದಿಸೆಯಲ್ಲಿ ಹೆಜ್ಜೆ ಹಾಕಿದೆ. ಮುದ್ರಾ ಯೋಜನೆಯಿಂದ ಹತ್ತು ಕೋಟಿ ಯುವಕರಿಗೆ ಲಾಭವಾಗಿದೆ. ಜನಧನ್, ಜೀವನಜ್ಯೋತಿ, ಜೀವನಸುರಕ್ಷಾ... ಎಷ್ಟುಯೋಜನೆಗಳು ಬಂದಿವೆ. ಇಂತಹ ಒಂದೂ ಯೋಜನೆಯನ್ನೂ ರಾಹುಲ್ ಗಾಂಧಿ ಆಗಲಿ ಅಥವಾ ಅವರ ಪೂರ್ವಿಕರಾಗಲಿ ಮಾಡಿದ್ದಾರೆ ಎಂದು ಹೇಳಲಿ ನೋಡೋಣ. ಗರೀಬಿ ಹಟಾವೋ ಎಂದು ಘೋಷಣೆ ಹೇಳಿದ್ದು ಬಿಟ್ಟರೆ, ರಾಷ್ಟ್ರೀಯ ಮಟ್ಟದ ಒಂದು ಯೋಜನೆಯನ್ನೂ ಅವರು ಮಾಡಲು ಆಗಲಿಲ್ಲ. ಉದಾಹರಣೆಗೆ ನನ್ನ ಖಾತೆಯನ್ನೇ ತೆಗೆದುಕೊಳ್ಳೋಣ. ಕಾಂಗ್ರೆಸ್ ಸರ್ಕಾರವಿದ್ದಾಗ 1.5 ಲಕ್ಷ ರು. ಆಗಿತ್ತು ಹೃದಯ ಚಿಕಿತ್ಸೆಯ ಸ್ಟೆಂಟ್ನ ಬೆಲೆ. ಈಗ ಅದು 28 ಸಾವಿರ ರು. ಆಗಿದೆ. ಆರು ಕೋಟಿ ಜನ ಹೃದ್ರೋಗಿಗಳಿದ್ದಾರೆ. 6 ಲಕ್ಷ ಸರ್ಜರಿ ಪ್ರತಿ ವರ್ಷ ಆಗುತ್ತೆ. 6 ಸಾವಿರ ಕೋಟಿ ರು. ಉಳಿತಾಯ ಆಗುತ್ತದೆ. ಮಂಡಿ ಟ್ರಾನ್ಸ್ಪ್ಲಾಂಟ್ ಬೆಲೆ ಒಂದೂವರೆ ಲಕ್ಷ ರು. ನಿಂದ ಎಂಟೂವರೆ ಲಕ್ಷ ರು. ಆಗುತ್ತಿತ್ತು. ಈಗ ಕೇವಲ 50 ಸಾವಿರ ರು.ಗೆ ಮಿತಿ ಮಾಡಲಾಗಿದೆ. ಇನ್ನು ಕಾಂಗ್ರೆಸ್ ಸರ್ಕಾರವಿದ್ದಾಗ 99 ಜನೌಷಧಿ ಕೇಂದ್ರವಿತ್ತು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ 555 ಜಿಲ್ಲೆಗಳಲ್ಲಿ 3175 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ.
ಮೋದಿ ಕಾರ್ಯಕ್ರಮಗಳಿಂದಾಗಿ ನೀವು ಗೆದ್ದುಬಿಡುತ್ತೀರಿ ಎಂಬಷ್ಟುಸುಲಭವೇ ಕರ್ನಾಟಕ ಚುನಾವಣೆ?
ಮೋದಿಯವರ ಕಾರ್ಯಕ್ರಮ ಎಷ್ಟುಪ್ರಮುಖವೋ, ಚುನಾವಣೆ ನಡೆಸುವ ಅಮಿತ್ ಶಾ ಅವರ ಕಾರ್ಯತಂತ್ರ ಕೂಡ ಅಷ್ಟೇ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅಮಿತ್ ಶಾ ಅವರು ಕೇವಲ ಚುನಾವಣೆ ಕಾರ್ಯತಂತ್ರ ರೂಪಿಸುವುದು ಮಾತ್ರವಲ್ಲ ಅವರು ಪಕ್ಷವನ್ನು ಅತ್ಯಂತ ಪ್ರಬಲವಾಗಿ ಬೇಳೆಸಿದ್ದಾರೆ ಮತ್ತು ತಳಮಟ್ಟದಲ್ಲಿ ಅತ್ಯಂತ ಭದ್ರವಾಗಿಸಿದ್ದಾರೆ. ದೇಶದಲ್ಲಿ ಬಿಜೆಪಿಯನ್ನು ಕಟ್ಟುವಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕೊಡುಗೆ ಅತ್ಯಂತ ನಿರ್ಣಾಯಕ. 11 ಕೋಟಿ ಸದಸ್ಯರನ್ನು ಹೊಂದಿದ ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆಸಿದ್ದು ಅವರು. ದೇಶದ ಇತಿಹಾಸದಲ್ಲೇ ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಅಮಿತ್ ಶಾ ತೋರಿದ ಚಾಣಾಕ್ಷತೆ, ರಣನೀತಿಯೇ ಮುಖ್ಯ ಕಾರಣ. ಅಮಿತ್ ಶಾ ಅವರು ಹಾಕಿದ ಅಡಿಪಾಯದ ಮೇಲೆ ಬಿಜೆಪಿಯು ದೇಶಾದ್ಯಂತ ಬೆಳೆಯುತ್ತಿದೆ. ಹಾಗಾಗಿ, ಮೋದಿಯವರ ನಾಯಕತ್ವ, ಅಮಿತ್ ಶಾ ಅವರ ರಣನೀತಿ ಹಾಗೂ ರಾಜ್ಯಾದ್ಯಂತ ಯಡಿಯೂರಪ್ಪವರ ಜನಪ್ರಿಯತೆ ನಮ್ಮನ್ನು ಈ ಬಾರಿ ಗೆಲ್ಲಿಸುತ್ತದೆ ಎಂಬ ವಿಶ್ವಾಸ ನಮಗಿದೆ.