Asianet Suvarna News Asianet Suvarna News

ಬೆಂಗಳೂರು ರಸ್ತೆಗೆ ಖ್ಯಾತ ಉದ್ಯಮಿ ಫಿದಾ!

ಬೆಂಗಳೂರು ರಸ್ತೆಗೆ ಖ್ಯಾತ ಉದ್ಯಮಿಯಿಂದ ಪ್ರಶಂಸೆ

 

Anand Mahindra Applauds Bengaluru Tender Sure Roads

ಬೆಂಗಳೂರು: ಕೆಲದಿನಗಳ ಹಿಂದೆ ಲಾಸ್ ಏಂಜಲೀಸ್ ಟೈಮ್ಸ್’ನಲ್ಲಿ ಕರ್ನಾಟಕದ ಪಾವಗಡ ಸೌರ ವಿದ್ಯುತ್ ಕೇಂದ್ರಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಇದೀಗ ದೇಶದ ಖ್ಯಾತ ಉದ್ಯಮಿ ಹಾಗೂ ಕಾರು ತಯಾರಕ ಆನಂದ್ ಮಹೀಂದ್ರಾ ಬೆಂಗಳೂರಿನ ಟೆಂಡರ್ ಶ್ಯೂರ್ ರಸ್ತೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಆಡಿರು ಆನಂದ್ ಮಹೀಂದ್ರಾ, ನಾನು ಬೆಂಗಳೂರಿನ ಸೈಂಟ್ ಮಾರ್ಕ್ಸ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್’ಗೆ ಭೇಟಿ ನೀಡಿದ್ದೆ. ಪಾದಾಚಾರಿಗಳಿಗೆ ರಸ್ತೆಗಳನ್ನು ಮರಳಿಪಡೆಯುವ ಚಳುವಳಿ ಆರಂಭವಾಗಿದೆಯೆಂದು ಅನಿಸುತ್ತದೆ. ಈ ನಡೆ ಪ್ರಶಾಂಸಾರ್ಹ. ನಾನು ಕಾರು ತಯಾರಕನಾಗಿರಬಹುದು, ಆದರೆ ನಗರಗಳು ಜನಸ್ನೇಹಿಯಾಗಿರಬೇಕು ಎಂಬುವುದರಲ್ಲಿ ವಿಶ್ವಾಸವಿಟ್ಟವನು ನಾನು, ಆ ನಿಟ್ಟಿನಲ್ಲಿ ‘ಪಾದಾಚಾರಿ ಮಾತ್ರ’ ಸೌಲಭ್ಯಗಳು ಮುಖ್ಯ. ಎಂದು ಹೇಳಿದ್ದಾರೆ.

Follow Us:
Download App:
  • android
  • ios