Asianet Suvarna News Asianet Suvarna News

ಕೊನೆಗೂ ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ಸಿಕ್ತು ಗ್ರೀನ್ ಸಿಗ್ನಲ್

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಯಾವಾಗ? ಏನು? ಎನ್ನುವ ವಿವರ ಇಲ್ಲಿದೆ.

AICC president Rahul Gandhi green signal to Karnataka coalition govt cabinet expansion
Author
Bengaluru, First Published Oct 14, 2018, 8:22 AM IST

ಬೆಂಗ​ಳೂರು, [ಅ. 14]: ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. 

ನಿಗ​ಮ ಮಂಡಳಿ ನೇಮ​ಕಾತಿ ಹಾಗೂ ಸಚಿವ ಸಂಪುಟ ವಿಸ್ತ​ರಣೆ ಪ್ರಕ್ರಿ​ಯೆ​ಯನ್ನು ಉಪ ಚುನಾ​ವಣೆ ನಂತರ ನಡೆ​ಸು​ವಂತೆ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವ​ರಿಗೆ ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೂಚನೆ ನೀಡಿ​ದ್ದಾರೆ ಎಂದು ಮೂಲ​ಗಳು ತಿಳಿ​ಸಿ​ವೆ.

ಎಚ್‌​ಎ​ಎಲ್‌ ನಿವೃತ್ತ ಉದ್ಯೋ​ಗಿ​ಗ​ಳೊಂದಿಗೆ ಸಂವಾದ ನಡೆ​ಸಲು ಶನಿ​ವಾರ ನಗ​ರಕ್ಕೆ ಆಗ​ಮಿ​ಸಿದ್ದ ರಾಹುಲ್‌ ಗಾಂಧಿ ಅವ​ರನ್ನು ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ಅವರು ಕುಮಾ​ರ​ಕೃಪ ಅತಿಥಿ ಗೃಹದಲ್ಲಿ ಭೇಟಿ ಮಾಡಿ​ದರು. 

ಈ ವೇಳೆ ನಿಗಮ -ಮಂಡಳಿ ಹಾಗೂ ಸಂಪುಟ ವಿಸ್ತ​ರಣೆ ವಿಚಾ​ರ​ವನ್ನು ಅವರು ರಾಹುಲ್‌ ಗಾಂಧಿ ಬಳಿ ಪ್ರಸ್ತಾ​ಪಿ​ಸಿ​ದರು ಎನ್ನ​ಲಾ​ಗಿ​ದೆ. ಇದಕ್ಕೆ ರಾಹುಲ್‌ ಗಾಂಧಿ ಅವರು ಉಪ ಚುನಾ​ವಣೆ ಮುಗಿ​ಯು​ತ್ತಿ​ದ್ದಂತೆಯೇ ಈ ಪ್ರಕ್ರಿ​ಯೆ​ಯನ್ನು ಕೈಗೊಳ್ಳಿ ಎಂದು ಸೂಚಿ​ಸಿ​ದರು ಎನ್ನ​ಲಾ​ಗಿದೆ. 

ಇದೇ ವೇಳೆ ಉಪ ಚುನಾ​ವ​ಣೆ​ಯಲ್ಲಿ ಮೈತ್ರಿ ಸಫ​ಲ​ವಾ​ಗ​ಬೇಕು ಹಾಗೂ ಎಲ್ಲಾ ಮೂರು ಲೋಕ​ಸಭಾ ಕ್ಷೇತ್ರ​ಗಳ ಉಪ ಚುನಾ​ವ​ಣೆ​ಯನ್ನು ಈ ಮೈತ್ರಿಕೂಟ ಗೆಲ್ಲ​ಬೇಕು. ಏಕೆಂದರೆ, ಈ ಉಪ ಚುನಾ​ವಣೆ ಮುಂದಿನ ಲೋಕ​ಸ​ಭೆ ಚುನಾ​ವ​ಣೆಯನ್ನು ಪ್ರಭಾ​ವಿ​ಸ​ಲಿದೆ. 

ಹೀಗಾಗಿ ಏನೇ ಭಿನ್ನಾ​ಭಿ​ಪ್ರಾ​ಯ​ಗಳು ಇದ್ದರೂ ಅದನ್ನು ಲಕ್ಷಿ​ಸದೆ ಉಪ ಚುನಾ​ವಣೆ ಗೆಲು​ವಿಗೆ ಮೈತ್ರಿಕೂಟದ ನಾಯ​ಕರು ಶ್ರಮಿ​ಸ​ಬೇಕು ಎಂದು ರಾಹುಲ್‌ ಹೇಳಿ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

Follow Us:
Download App:
  • android
  • ios