Asianet Suvarna News Asianet Suvarna News

ಮತ್ತೆ ರಾಜ್ಯದಲ್ಲಿ ಶೀಘ್ರ ಬಿಜೆಪಿ ಅಧಿಕಾರಕ್ಕೆ : ಬಿಜೆಪಿ ಮುಖಂಡ ಹೇಳಿದ ಭವಿಷ್ಯ

ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ಶಾಸಕರೋರ್ವರು ಭವಿಷ್ಯ ಹೇಳಿದ್ದಾರೆ. ಪಿತೃಪಕ್ಷದ ಬಳಿಕ ಮತ್ತೆ ಅಧಿಕಾರಕ್ಕೇರಲಿದ್ದೇವೆ ಎಂದಿದ್ದಾರೆ. 

Again We Take Charge In Karnataka Politics
Author
Bengaluru, First Published Sep 26, 2018, 12:25 PM IST

ಬಾಗಲಕೋಟೆ: ರಾಜ್ಯದಲ್ಲಿ ಪಿತೃ ಪಕ್ಷದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಭವಿಷ್ಯ ನುಡಿದಿದ್ದಾರೆ.

 ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ರಚಿಸುವ ಬಗ್ಗೆ ಸೂಕ್ತ ಸಮಯದಲ್ಲಿ ಎಲ್ಲವನ್ನೂ ಹೇಳುವೆ ಎಂದರು. 

ಸದ್ಯಕ್ಕೆ ಶಾಸಕರು ರಾಜೀನಾಮೆ ನೀಡಿ ಚುನಾವಣೆ ಎದುರಿಸುವುದು ಸುಲಭದ ಕೆಲಸವಲ್ಲ ಎಂದಷ್ಟೇ ತಿಳಿಸಿದರು.

ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಅನೇಕ ರೀತಿಯ ಗೊಂದಲಗಳು ಎದುರಾಗಿ ಸದ್ಯ ಪರಿಸ್ಥಿತಿ ತಣ್ಣಗಾಗುತ್ತಿದ್ದು ಮತ್ತೊಮ್ಮೆ ಶಾಸಕರು ಅಧಿಕಾರ ಹಿಡಿಯುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. 

Follow Us:
Download App:
  • android
  • ios