Asianet Suvarna News Asianet Suvarna News

ಉ.ಪ್ರ.ದಲ್ಲಿ ಈಗ ಆಗಿದ್ದು ದಿಢೀರ್ ದುರಂತವಲ್ಲ; 70 ವರ್ಷಗಳ ನಿರ್ಲಕ್ಷ್ಯದ ಫಲ

ಜಪಾನೀಸ್ ಎನ್ಸೆಫಾಲಿಟಿಸ್ ಕಾಯಿಲೆಗೆ ದೇಶಾದ್ಯಂತ ಮಕ್ಕಳು ಬಲಿಯಾಗಿದ್ದಾರೆ. ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಪ್ರತೀ ವರ್ಷ 10 ಲಕ್ಷ ಜನರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಕೇರಳದಲ್ಲಿ 420 ಜನರು ತೀವ್ರ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಸರಕಾರವೇ ವರದಿ ನೀಡಿದೆ.

administration failure to contain endemic diseases for years

ನವದೆಹಲಿ(ಆ. 14): ಉತ್ತರಪ್ರದೇಶದ ಗೋರಖ್'ಪುರದಲ್ಲಿ ಸಂಭವಿಸಿದ 60ಕ್ಕೂ ಹೆಚ್ಚು ಮಕ್ಕಳ ಸಾವಿನ ದುರಂತ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜಪಾನೀಸ್ ಎನ್ಸೆಫಾಲಿಟಿಸ್ (ಮಿದುಳಿನ ಉರಿಯೂತ) ಕಾಯಿಲೆಯು ಈ ದುರಂತಕ್ಕೆ ಕಾರಣವೆನ್ನಲಾಗಿದೆ. ನಿಜವಾದ ದುರಂತದ ವಿಚಾರವೆಂದರೆ ಈ ಕಾಯಿಲೆಯು ದಿಢೀರ್ ಕಾಣಿಸಿಕೊಂಡದ್ದಲ್ಲ. ವರ್ಷಗಳಿಂದ ಮಾರಕವಾಗಿ ಕಾಡುತ್ತಿರುವ ಕಾಯಿಲೆಯಾಗಿದೆ. ಗೋರಖ್'ಪುರ ಸೇರಿದಂತೆ ಉತ್ತರಪ್ರದೇಶ ಪೂರ್ವ ಭಾಗದಲ್ಲಿ ಮಿದುಳಿನ ಉರಿಯೂತದಿಂದ ನೂರಾರು ಮಕ್ಕಳು ಈ ಮುಂಚೆಯೇ ಸಾವನ್ನಪ್ಪಿದ್ದರು. 2013ರಲ್ಲಿ ಪಿಟಿಐ ವರದಿ ಪ್ರಕಾರ ಗೋರಖ್'ಪುರದಲ್ಲಿ ಎನ್ಸೆಫಾಲಿಟಿಸ್'ಗೆ ಬಲಿಯಾದ ಮಕ್ಕಳ ಸಂಖ್ಯೆ 650ಕ್ಕೂ ಹೆಚ್ಚು. 2014ರಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರು ಈ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡುವ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಕಾಂಗ್ರೆಸ್ ಪಕ್ಷದವರು ಈ ಬಗ್ಗೆ ಚರ್ಚೆಗೆ ಆಸ್ಪದ ಕೊಡದೆಯೇ ಸಭೆಯಿಂದ ಹೊರನಡೆದಿದ್ದರಂತೆ.

ಏನಿದು ಎನ್ಸೆಫಾಲಿಟಿಸ್?
ಇವು ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ನೊಣ, ತಿಗಣೆ ಮೊದಲಾದವೂ ಈ ಕಾಯಿಲೆಯನ್ನು ಹರಡಬಲ್ಲುವು. ಡೆಂಗ್ಯೂ, ಚಿಕೂನ್'ಗುನ್ಯಾ, ಹಳದಿ ಜ್ವರ, ಝೀಕಾ ವೈರಸ್, ಮಲೇರಿಯಾ, ಎನ್ಸೆಫಾಲಿಟಿಸ್, ಫಿಲಾರಿಯಾಸಿಸ್, ರಿಕೆಟ್'ಸಿಯಾಲ್ ಇತ್ಯಾದಿ ಕಾಯಿಲೆಗಳು ಈ ವರ್ಗಕ್ಕೆ ಸೇರಿದವು.

ಉ.ಪ್ರ.ದಲ್ಲಿ ಮಾತ್ರವಲ್ಲ....
ಜಪಾನೀಸ್ ಎನ್ಸೆಫಾಲಿಟಿಸ್ ಕಾಯಿಲೆಗೆ ದೇಶಾದ್ಯಂತ ಮಕ್ಕಳು ಬಲಿಯಾಗಿದ್ದಾರೆ. ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಪ್ರತೀ ವರ್ಷ 10 ಲಕ್ಷ ಜನರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಕೇರಳದಲ್ಲಿ 420 ಜನರು ತೀವ್ರ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಸರಕಾರವೇ ವರದಿ ನೀಡಿದೆ.

ರಾಜೀವ್ ಆಗ್ರಹ:
ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಸಾಂಕ್ರಾಮಿಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿರು ಸಂಗತಿ ಬಗ್ಗೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ. ಸರಕಾರಗಳ ವೈಫಲ್ಯಗಳು ಈ ದುರಂತಕ್ಕೆ ಕಾರಣ ಎಂದವರು ಆರೋಪಿಸಿದ್ದಾರೆ. ದುರಂತ ಸಂಭವಿಸಿದ ಬಳಿಕ 2-3 ದಿನ ಆಕ್ರೋಶ ವ್ಯಕ್ತಪಡಿಸಿದಾಕ್ಷಣ ಏನೂ ಉಪಯೋಗವಿಲ್ಲ. ನಮ್ಮ ಆರೋಗ್ಯ ದುರವಸ್ಥೆಯನ್ನು ಸರಿಪಡಿಸುವಂತೆ ಆಡಳಿತದ ಮೇಲೆ ನಿರಂತರವಾಗಿ ಒತ್ತಡ ಹೇರಬೇಕು. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ನೀಡಿದ್ದಾರೆ.

Follow Us:
Download App:
  • android
  • ios