‘ಈ ಪ್ರಕರಣ ಸಂಬಂಧ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರುನೀಡಿರಲಿಲ್ಲ. ಆದರೆ, ನಟ ದಿಲೀಪ್ ಕುಮಾರ್ ಅವರ ಬಂಧನ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ,’ ಎಂದು ಹೇಳಿದ್ದಾರೆ.

ತಿರುವನಂತಪುರ(ಜು.14): ಕೇರಳ ಮೂಲದ ಬಹುಭಾಷಾ ನಟಿ ಅವರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ಸೂಪರ್‌ ಸ್ಟಾರ್ ದಿಲೀಪ್ ಕುಮಾರ್ ಬಂಧನ ವಿಚಾರವಾಗಿಇದೇ ಮೊದಲ ಬಾರಿಗೆ ಸಂತ್ರಸ್ತ ನಟಿ ಮೌನ ಮುರಿದಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿದ ಸಂತ್ರಸ್ತ ನಟಿ, ‘ಈ ಪ್ರಕರಣ ಸಂಬಂಧ ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ದೂರುನೀಡಿರಲಿಲ್ಲ. ಆದರೆ, ನಟ ದಿಲೀಪ್ ಕುಮಾರ್ ಅವರ ಬಂಧನ ನನ್ನಲ್ಲಿ ಆಶ್ಚರ್ಯ ಮೂಡಿಸಿದೆ,’ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

‘ನಾನು ಮತ್ತು ದಿಲೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದೆವು. ಕೆಲವು ವೈಯಕ್ತಿಕ ವೈಮನಸ್ಯಗಳಿಂದ ನಾವಿಬ್ಬರೂ ದೂರವಾಗಿದ್ದೇವೆ. ಆದರೆ, ಈ ಪ್ರಕರಣದಲ್ಲಿ ನಾನು ಹೆಸರನ್ನೂ ಸಹ ಉಲ್ಲೇಖಿಸಿದೂರು ದಾಖಲಿಸಿರಲಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಎಂದು ದಿಲೀಪ್ ಕುಮಾರ್ ಹೇಳಿದ್ದಾರೆ. ಸತ್ಯ ಹೊರ ಬರಲೇಬೇಕಿದ್ದು, ದಿಲೀಪ್ ಕುಮಾರ್ ನಿರಪರಾಧಿಯಾಗಿದ್ದರೂ, ಸತ್ಯಶೀಘ್ರವೇ ಹೊರಬರಬೇಕು. ಶೀಘ್ರದಲ್ಲೇ ಸತ್ಯ ಹೊರಬೀಳಲಿದೆ,’ ಎಂದಿದ್ದಾರೆ.