ಮೈಸೂರಿನ ಪೌರ ಕಾರ್ಮಿಕರ ಪ್ರತಿಭಟನೆಗೆ ನಟ ಪ್ರಕಾಶ್ ರಾಜ್ ಬೆಂಬಲ
ಸಿಎಂ ಜೊತೆ ಸಭೆ ನಡೆಸುವವರೆಗೂ ಕಸ ತೆಗೆಯಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಮೈಸೂರಿನ ಪೌರ ಕಾರ್ಮಿಕರಿಗೆ ನಟ ಪ್ರಕಾಶ್ ರೈ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಂಗಳವಾರದವರೆಗೂ ಸ್ವಚ್ಛಗೊಳಿಸಲ್ಲ ಎಂದು ಪೌರ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಪ್ರಕಾಶ್ ರೈ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು.
- ಮೈಸೂರಿನ ಪೌರ ಕಾರ್ಮಿಕರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ನಟ ಪ್ರಕಾಶ್ ರೈ
- ಸಿಎಂ ಜೊತೆ ಸಭೆ ನಡೆಸುವವರೆಗೂ ಹೋರಾಟ ಕೈಬಿಡಲ್ಲ ಎಂದ ಪೌರ ಕಾರ್ಮಿಕರು