ಪಾದ್ರಿ ಟಾಮ್‌ ಉಳುನ್ನಲಿಲ್‌ ಸಹಾಯಕ್ಕಾಗಿ ಯಾಚಿಸಿರುವ ವಿಡಿಯೊವೊಂದನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿದೆ.

ಏಡನ್‌: ಯೆಮೆನ್‌ನ ಏಡನ್‌ನಲ್ಲಿ ಕಳೆದ ವರ್ಷ ಹೋಂ ಕೇರ್‌ ಒಂದರ ಮೇಲೆ ನಡೆದ ದಾಳಿಯ ಬಳಿಕ ಅಪಹರಣಗೊಂಡಿದ್ದ ಕೇರಳ ಮೂಲದ ಬೆಂಗಳೂರಿನ ಪಾದ್ರಿ ಟಾಮ್‌ ಉಳುನ್ನಲಿಲ್‌ ಸಹಾಯಕ್ಕಾಗಿ ಯಾಚಿಸಿರುವ ವಿಡಿಯೊವೊಂದನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಡಿಯೋದಲ್ಲಿ ಉಳುನ್ನಲಿಲ್‌ ತಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸಹಾಯ ಬೇಕು ಎಂದು ಯಾಚಿಸಿದ್ದಾರೆ.

ಅಪಹರಣಕಾರರು ಭಾರತೀಯ ಸರ್ಕಾರ, ಯುಎಇಯ ಅಬುಧಾಬಿಯ ಕ್ಯಾಥೊಲಿಕ್‌ ಬಿಷಪ್‌ರನ್ನು ಸಂಪರ್ಕಿಸಿ ತಮ್ಮ ಬೇಡಿಕೆಯನ್ನಿರಿಸಿದ್ದಾರೆ, ಆದರೆ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ ಎಂದು ಉಳುನ್ನಲಿಲ್‌ ಹೇಳಿದ್ದಾರೆ.