ರಾಹುಲ್ ಗಾಂಧಿ ಸಮಾವೇಶಕ್ಕೆ ಬಂದಿದ್ದವನ ಜೇಬಿಗೆ ಬಿತ್ತು ಕತ್ತರಿ
ತಿಕೋಟಾ ಮಹಿಳಾ ಸಮಾವೇಶದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ವಿಜಯಪುರ (ಫೆ.24): ತಿಕೋಟಾ ಮಹಿಳಾ ಸಮಾವೇಶದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ.
ಸಮಾವೇಶಕ್ಕೆ ಬಂದಿದ್ದ ರಾಹುಲ್ ಗಾಂಧಿ ಅಭಿಮಾನಿ ಜೇಬಿಗೆ ಕಳ್ಳರು ಕತ್ತರಿ ಹಾಕಿದ್ದಾರೆ. ವಿಜಯಪುರ ತಾಲೂಕಿನ ತಿಕೋಟಾ ಪಟ್ಟಣದಲ್ಲಿ ನಡೆದ ಮಹಿಳಾ ಸಮಾವೇಶಕ್ಕೆ ರಾಹುಲ್ ಗಾಂಧಿಯನ್ನು ನೋಡೋಕೆ ಬಂದ ಬಸಪ್ಪ ಕಾಶಿ ಎಂಬುವರ ಜೇಬಿಗೆ ಜೇಬುಗಳ್ಳರು ಬ್ಲೇಡ್ ಹಾಕಿದ್ದಾರೆ. ಕಿಸೆಯಲ್ಲಿದ್ದ 10 ಸಾವಿರ ರೂಪಾಯಿ ಕದ್ದಿದ್ದಾರೆ. ಹಣ ಕಳೆದುಕೊಂಡ ಬಸಪ್ಪ ಕಾಶಿ ಕಂಗಾಲಾಗಿದ್ದಾರೆ.