ತಾನು ಉಳಿಸಿದ್ದ 1.50;ಕ್ಷ ದಾನ ಮಾಡಿದ ಬಾಲಕಿ| ಪೊಲೀಸರಿಗೂ ಅಚ್ಚರಿ ಮೂಡಿಸಿದೆ ಹಣ ನೀಡಲು ಕಾರಣವಾದ ಆ ಅಂಶ| ಆಯುಕ್ತರಿಂದಲೇ ಪ್ರಶಂಸೆ
ಚೆನ್ನೈ[ಮಾ.07]: 9 ವರ್ಷದ ವಿದ್ಯಾರ್ಥಿನಿಯೊಬ್ಬಳು ತಾನು ಈವರೆಗೆ ಉಳಿಸಿದ ಸುಮಾರು 1.50 ಲಕ್ಷ ಮೊತ್ತವನ್ನು ಚೆನ್ನೈ ನಗರ ಪೊಲೀಸರಿಗೆ ದಾನಗೈದಿದ್ದಾಳೆ. ಈ ಹಣದಿಂದ ನಗರದೆಲ್ಲೆಡೆ ಸಿಸಿಟಿವಿ ಅಳವಡಿಸಲು ಮನವಿ ಮಾಡಿಕೊಂಡಿದ್ದಾಳೆ.
ಶ್ರೀಹಿತಾಳ ಈ ಕಾಳಜಿಯನ್ನು ನೋಡಿದ ನಗರ ಪೊಲೀಸ್ ಆಯುಕ್ತ ಎ. ಕೆ. ವಿಶ್ವನಾಥನ್ ಆಕೆಯನ್ನು ತನ್ನ ಕಚೇರಿಗೆ ಆಹ್ವಾನಿಸಿ ಪ್ರಶಂಸಿಸಿದ್ದಾರೆ. ಅಲ್ಲದೇ ಸುಸದ್ದಿಗೋಷ್ಟಿಯನ್ನು ಆಯೋಜಿಸಿ ಆ ಪುಟ್ಟ ಬಾಲಕಿಯ ಸಾಧನೆಯನ್ನು ಕೊಂಡಾಡಿದ್ದಾರೆ.
ಇಂತಹ ಒಂದು ಯೋಚನೆ ಆ ಪುಟ್ಟ ಬಾಲಕಿಗೆ ಎಲ್ಲಿಂದ ಬಂತು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರಿಸಿರುವ ಶ್ರೀಹಿತಾ 'ನನ್ನ ತಂದೆಯ ಕಚೇರಿಯಲ್ಲಿ ಪೊಲೀಸರು ಸಿಸಿಟಿವಿ ಕ್ಯಾಮರಾದ ಉಪಯೋಗಗಳ ಬಗ್ಗೆ ಕಾರ್ಯಾಗಾರವನ್ನು ನಡೆಸಿದ್ದರು. ಇದನ್ನು ನೋಡಿದ ಬಳಿಕ ನನ್ನಲ್ಲಿರುವ ಹಣವನ್ನು ಸಿಸಿಟಿಗಾಗಿ ದಾನ ಮಾಡುವ ಯೋಚನೆ ಬಂತು' ಎಂದಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 3:26 PM IST