ಸೈನಿಕರಿಂದ ಕೊಲ್ಲಲ್'ಪಟ್ಟ ಉಗ್ರರು ಲಷ್ಕರ್​​ ಈ ತಯ್ಯಬಾ ಸಂಘಟನೆಯವರಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತಿದೆ.

ಶ್ರೀನಗರ(ನ.18): ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತ್ಯೆಗೀಡಾಗಿ ಓರ್ವ ವಾಯುದಳದ ಕಮಾಂಡೊ ಹುತಾತ್ಮನಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗುಪ್ತದಳದ ಮಾಹಿತಿ ಮೇರೆಗೆ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೇನಾಪಡೆ ಕಾರ್ಯಾಚರಣೆ ಕೈಗೊಂಡಾದ ಉಗ್ರರಿರುವುದು ಪತ್ತೆಯಾಯಿತು. ಈ ಸಂದರ್ಭದಲ್ಲಿ ಇಬ್ಬರ ನಡುವೆ ನಡೆದ ಕಾಳಗದಲ್ಲಿ ಐವರು ಉಗ್ರರು ಹತ್ಯೆಗೀಡಾದರೆ ಭಾರತೀಯ ವಾಯದಳದ ಓರ್ವ ಸೈನಿಕ ಹುತಾತ್ಮನಾಗಿದ್ದು, ರಾಷ್ಟ್ರೀಯ ರೈಫಲ್'ನ ಮತ್ತೋರ್ವ ಗಾಯಗೊಂಡಿದ್ದಾನೆ.

ಸೈನಿಕರಿಂದ ಕೊಲ್ಲಲ್'ಪಟ್ಟ ಉಗ್ರರು ಲಷ್ಕರ್​​ ತಯ್ಯಬಾಸಂಘಟನೆಯವರಾಗಿದ್ದು, ಕಾರ್ಯಾಚರಣೆ ಮುಂದುವರಿಯುತ್ತಿದೆ.