ಸೇನಾ ಕ್ಯಾಂಪ್’ನೊಳಗೆ ನುಗ್ಗಲು ಯತ್ನಿಸಿದ 4 ಉಗ್ರರ ಹತ್ಯೆ
ಬಂಡಿಪೋರ ಜಿಲ್ಲೆಯ ಸಂಬಲ್ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಟ್ಟಹಾಸ ಮತ್ತೆ ಉಲ್ಪಣಗೊಂಡಿದೆ. ಭಾರತೀಯ ಸೇನೆ ಇಂದು ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.
ಬಂಡಿಪೋರ ಜಿಲ್ಲೆಯ ಸಂಬಲ್ನಲ್ಲಿ 4 ಉಗ್ರರು ಸಿಆರ್ ಪಿಎಫ್ ಶಿಬಿರವನ್ನು ಮುಂಜಾನೆ 4.10ರ ಹೊತ್ತಿಗೆ ಗುರಿಯಾಗಿಸಿ ದಾಳಿ ನಡೆಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸಿಆರ್’ಪಿಎಫ್ ಯೋಧರು ಗುಂಡಿನ ದಾಳಿ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ನಾಲ್ಕು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಹತ ಉಗ್ರರ ಬಳಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಯೋಧರ ಕ್ರಮವನ್ನು ಸೇನೆಯ ಹಿರಿಯ ಅಧಿಕಾರಿಗಳು ಪ್ರಶಂಸಿದ್ದಾರೆ. ಉಗ್ರರನ್ನು ಒಳನುಸುಳಲು ಬಿಟ್ಟಿಲ್ಲ ಮಾತ್ರವಲ್ಲದೇ ಅವರನ್ನು ಹೊಡೆದುರುಳಿಸಿರುವುದು ಸಿಆರ್’ಪಿಎಫ್ ಮಹಾನಿರ್ದೇಶಕ ಆರ್.ಆರ್.ಭಟ್ನಾಗರ್ ಹೇಳಿದ್ದಾರೆ.