ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು ಮುಳುಗಡೆ
ಓಖಿ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರದಿಂದ ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು ಲಕ್ಷದ್ವೀಪ ಬಳಿಯ ಕವರತಿ ಬಳಿ ಮುಳುಗಡೆಯಾಗಿದೆ.
ಮಂಗಳೂರು (ಡಿ.01): ಓಖಿ ಚಂಡಮಾರುತದ ರಕ್ಕಸ ಅಲೆಗಳ ಅಬ್ಬರದಿಂದ ಮಂಗಳೂರಿನಿಂದ ಹೊರಟಿದ್ದ 2 ಹಡಗುಗಳು ಲಕ್ಷದ್ವೀಪ ಬಳಿಯ ಕವರತಿ ಬಳಿ ಮುಳುಗಡೆಯಾಗಿದೆ.
ಎರಡು ಹಡಗುಗಳಲ್ಲಿ ದಿನಸಿ, ತರಕಾರಿ, ಜಲ್ಲಿಯನ್ನು ಸಾಗಿಸಲಾಗುತ್ತಿತ್ತು. ಎರಡು ಹಡಗುಗಳಲ್ಲಿ 14 ಸಿಬ್ಬಂದಿಗಳಿದ್ದರು. ಹೆಲಿಕಾಪ್ಟರ್ ಮೂಲಕ ನೌಕಾದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ನಾಲ್ವರನ್ನು ರಕ್ಷಿಸಲಾಗಿದೆ. ಉಳಿದ 10 ಮಂದಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಓಕ್ಲಿ ಚಂಡಮಾರುತಕ್ಕೆ ಸಿಕ್ಕಿ ಕೇರಳ ಹಾಗೂ ತಮಿಳುನಾಡಿನ ಬೋಟ್'ಗಳು ಸಹ ನಿನ್ನೆ ಮುಳುಗಿವೆ. ಅದರ ಒಂದು ದೃಶ್ಯ
ಕನ್ಯಾಕುಮಾರಿಯಲ್ಲಿ ನಿನ್ನೆ ನಾಪತ್ತೆಯಾದ ಹಡಗು