ಕೇರಳಕ್ಕೆ ಪ್ರಯಾಣಿಸುವುದಾದರೆ ಇಲ್ಲೊಮ್ಮೆ ಗಮನಿಸಿ
ನೀವು ಕೇರಳಕ್ಕೆ ಪ್ರಯಾಣಿಸುತ್ತಿದ್ದೀರಾ ಹಾಗಾದ್ರೆ ಇತ್ತ ಒಮ್ಮೆ ಗಮನ ಹರಿಸುವುದು ಒಳಿತು. ರಸ್ತೆಗಳು ಹದಗೆಟ್ಟ ಹಿನ್ನೆಲೆಯಲ್ಲಿ ಎಸಿ ಬಸ್ ಸೇವೆಗಳನ್ನು ರದ್ದು ಮಾಡಲಾಗಿದೆ.
ಬೆಂಗಳೂರು: ಪ್ರವಾಹದಿಂದ ಕೇರಳ ರಸ್ತೆಗಳು ಹದಗೆಟ್ಟಿ ರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಬೆಂಗಳೂರಿನಿಂದ ಕೇರಳಕ್ಕೆ ಕಾರ್ಯಾಚರಣೆ ಮಾಡುವ ಹವಾನಿಯಂತ್ರಿತ ಬಸ್ಗಳ ಸಂಚಾರವನ್ನು ಆ.27 ಮತ್ತು 28ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಎರಡು ದಿನಗಳ ಕಾಲ ಬೆಂಗಳೂರು -ಕಣ್ಣಾನೂರು, ಬೆಂಗಳೂರು-ಕಾಞಗಾಡ್ ಮತ್ತು ಬೆಂಗ ಳೂರು- ಕಲ್ಲಿಕೋಟೆ ನಡುವೆ ಸಂಚರಿಸುವ ಕರೋನ ಎ.ಸಿ.ಸ್ಲೀಪರ್, ಐರಾವತ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್ಗಳ ಸಂಚಾರ ರದ್ಧುಗೊಳಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.