ನೀವು ಕೇರಳಕ್ಕೆ ಪ್ರಯಾಣಿಸುತ್ತಿದ್ದೀರಾ ಹಾಗಾದ್ರೆ ಇತ್ತ ಒಮ್ಮೆ ಗಮನ ಹರಿಸುವುದು ಒಳಿತು. ರಸ್ತೆಗಳು ಹದಗೆಟ್ಟ ಹಿನ್ನೆಲೆಯಲ್ಲಿ ಎಸಿ ಬಸ್  ಸೇವೆಗಳನ್ನು ರದ್ದು ಮಾಡಲಾಗಿದೆ. 

ಬೆಂಗಳೂರು: ಪ್ರವಾಹದಿಂದ ಕೇರಳ ರಸ್ತೆಗಳು ಹದಗೆಟ್ಟಿ ರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಬೆಂಗಳೂರಿನಿಂದ ಕೇರಳಕ್ಕೆ ಕಾರ್ಯಾಚರಣೆ ಮಾಡುವ ಹವಾನಿಯಂತ್ರಿತ ಬಸ್‌ಗಳ ಸಂಚಾರವನ್ನು ಆ.27 ಮತ್ತು 28ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಎರಡು ದಿನಗಳ ಕಾಲ ಬೆಂಗಳೂರು -ಕಣ್ಣಾನೂರು, ಬೆಂಗಳೂರು-ಕಾಞಗಾಡ್ ಮತ್ತು ಬೆಂಗ ಳೂರು- ಕಲ್ಲಿಕೋಟೆ ನಡುವೆ ಸಂಚರಿಸುವ ಕರೋನ ಎ.ಸಿ.ಸ್ಲೀಪರ್, ಐರಾವತ ಮತ್ತು ಐರಾವತ ಕ್ಲಬ್ ಕ್ಲಾಸ್ ಬಸ್‌ಗಳ ಸಂಚಾರ ರದ್ಧುಗೊಳಿಸಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.