ದಾರಿಯಲ್ಲಿ ಗಾಡಿ, ಬೆಂಗ್ಳೂರು ಪೊಲೀಸರ ವಿರುದ್ಧವೇ ಕಿಡಿ: ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾಗಳು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತವೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ಇದೀಗ ಬೆಂಗಳೂರಿನ ಹೊಯ್ಸಳ ಪೊಲೀಸರ ಎಡವಟ್ಟೊದು ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿ ವೈರಲ್ ಆಗ್ತಿದೆ.
ಬೆಂಗಳೂರು[ಸೆ.30] ವಯ್ಯಾಲಿಕಾವಲ್ ತಿರುಮಲ ದೇವಾಲಯದ ಬಳಿ ಹೊಯ್ಸಳ ಪೊಲೀಸರು ತಮ್ಮ ವಾಹನವನ್ನು ಮಧ್ಯ ದಾರಿಯಲ್ಲಿ ನಿಲ್ಲಿಸಿಕೊಂಡಿದ್ದನ್ನು ಸಾರ್ವಜನಿಕರೊಬ್ಬರು ಪ್ರಶ್ನೆ ಮಾಡಿ ವಿಡಿಯೋವನ್ನು ಸೋಶಿಯಲ್ ಮೀಡಿದಲ್ಲಿ ಹರಿಬಿಟ್ಟಿದ್ದಾರೆ.
ಪೊಲೀಸರು ಮತ್ತು ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರ ನಡುವೆ ವಗ್ವಾದ ನಡೆದಿದೆ. ಆದರೆ ಪೊಲೀಸರು ನಾವು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅಲ್ಲಿನ ಪಾಯಿಂಟ್ ನಲ್ಲಿ ಕರ್ತವ್ಯದಲ್ಲಿ ಇದ್ದೇವು ಎಂದು ಹೇಳಿದ್ದಾರೆ. ಪೊಲೀಸರಿಗೆ ವಿರೋಧವಾದ ಕಮೆಂಟ್ ಗಳು ಸಾಕಷ್ಟು ಬಂದಿದೆ.