ವಿ.ಸೋಮಣ್ಣ ಅವರು ನನ್ನನ್ನು ಜ್ಞಾನಿ ಎಂದಿರುವುದು ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಸಂಘಟನಾ ಚತುರ ಎಂದು ಹೊಗಳಿರುವುದು ನನ್ನ ಮೇಲಿನ ಪ್ರೀತಿಯಿಂದ ಎಂದು ಸಾ ರಾ ಮಹೇಶಹ ಹೇಳಿದ್ದಾರೆ. 

ಕೆ.ಆರ್‌.ನಗರ [ಸೆ.08]: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ನನ್ನನ್ನು ಜ್ಞಾನಿ ಎಂದಿರುವುದು ಮತ್ತು ಶಾಸಕ ಜಿ.ಟಿ.ದೇವೇಗೌಡ ಅವರು ಸಂಘಟನಾ ಚತುರ ಎಂದು ಹೊಗಳಿರುವುದು ನನ್ನ ಮೇಲಿನ ಪ್ರೀತಿಯಿಂದ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

 ತಾಲೂಕಿನ ಲಾಳಂದೇವನಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ಈಗ ಶಾಸಕನಾಗಿದ್ದರೂ, ಹಿಂದೆ ಸಚಿವನಾಗಿದ್ದೆ. ಹೀಗಾಗಿ, ಮುಂದೆ ಸಂಸದನಾಗಿ ರಾಷ್ಟ್ರ ಮಟ್ಟದಲ್ಲಿ ಬೆಳೆಯಲಿ ಎಂಬ ಆಸೆಯಿಂದ ಜಿ.ಟಿ.ದೇವೇಗೌಡರು ಆ ರೀತಿ ಮಾತನಾಡಿದ್ದು, ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

ಉಳಿದಂತೆ ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲುವುದಿಲ್ಲ ಎಂಬ ಜಿ.ಟಿ.ದೇವೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಹಿರಿಯ ನಾಯಕರಾದ ಜಿ.ಟಿ.ದೇವೇಗೌಡರು ಬೇಸರ ಮತ್ತು ಸಿಟ್ಟಿನಿಂದ ಆ ರೀತಿ ಹೇಳಿರಬಹುದು. ಹೀಗಾಗಿ, ಪಕ್ಷದ ನಾಯಕರು ಮತ್ತು ಹಿರಿಯರು ಸೇರಿ ಅವರನ್ನು ಸಮಾಧಾನಪಡಿಸುತ್ತೇವೆ ಎಂದರು.

ದಸರಾಗೆ ನನ್ನ ವೈಯುಕ್ತಿಕ ಬೆಂಬಲವಿದೆ. ಆದರೆ, ನಮ್ಮಿಂದ ವಾಮಮಾರ್ಗದಲ್ಲಿ ಬಲವಂತವಾಗಿ ಅಧಿಕಾರ ಕಸಿದಿರುವವರ ಜೊತೆ ಯಾವುದೇ ಕಾರಣಕ್ಕೂ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.