Asianet Suvarna News Asianet Suvarna News

ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

train roots changed due to Tropical Cyclone in arabian sea
Author
Bangalore, First Published Jun 3, 2020, 9:20 AM IST

ಮಂಗಳೂರು(ಜೂ. 03): ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಎರ್ನಾಕುಳಂ ನಿಜಾಮುದ್ದೀನ್‌ ಸ್ಪೆಶಲ್‌ ರೈಲು, ತಿರುವನಂತಪುರಂ ಸೆಂಟ್ರಲ್‌-ಲೋಕಮಾನ್ಯತಿಲಕ್‌ ಸ್ಪೆಶಲ್‌ ರೈಲು ಹಾಗೂ ನವದೆಹಲಿ-ತಿರುವನಂತಪುರಂ ಸೆಂಟ್ರಲ್‌ ಸ್ಪೆಶಲ್‌ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

ಈ ರೈಲುಗಳು ವಯಾ ಮಡಗಾಂವ್‌ ಜಂಕ್ಷನ್‌, ಲೋಂಡಾ, ಮೀರಜ್‌, ಪುಣೆ, ಮಾನ್ಮಾಡ್‌, ಕಲ್ಯಾಣ್‌ ಮೂಲಕ ಸಂಚರಿಸಲಿವೆ. ಲೋಕಮಾನ್ಯತಿಲಕ್‌-ತಿರುವನಂತಪುರಂ ಸೆಂಟ್ರಲ್‌ ರೈಲು ಜೂನ್‌ 3ರಂದು ಸಂಜೆ 5 ಗಂಟೆಗೆ ಹೊರಡಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಮಂಗಳೂರಿನಲ್ಲಿ ಈಗಾಗಲೇ ಹಲವು ಬಾರಿ ಮಳೆಯಾಗಿದ್ದು, ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದ ಕರವಾಳಿಯಲ್ಲಿ ಕಡಲಿನ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಭಾರೀ ಮಳೆ ಸಾಧ್ಯತೆ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ರೈಲು ಮಾರ್ಗ ಬದಲಾಯಿಸಲಾಗಿದೆ.

Follow Us:
Download App:
  • android
  • ios