ನರ್ಸರಿ ಶಾಲೆಗೆ ಹೋಗಿದ್ದ ಮಗು ಅಮ್ಮ ಬೇಕು ಎಂದು ಹಠ ಮಾಡಿತ್ತು. ಒಂದು ಚೂರು ರಚ್ಚೆ ಹಿಡಿದಿತ್ತು. ಆ ಮಗುವನ್ನು ಸಮಾಧಾನಪಡಿಸಿ, ಸಂತೈಸಬೇಕಿದ್ದ ನರ್ಸರಿ ಶಿಕ್ಷಕಿ ಮಾಡಿದ್ದು ಮಾತ್ರ ಅಮಾನವೀಯ ಕೆಲಸ. ಏನೂ ಅರಿಯದ ಮುಗ್ಧ ಮಗುವಿನ ಬೆನ್ನಿಗೆ ಬರೆ ಹಾಕಿದ್ದಾಳೆ.
ಹುಬ್ಬಳ್ಳಿ[ಆ.29] ಅಮ್ಮ ಬೇಕು ಎಂದು ಹಠ ಹಿಡಿದಿದ್ದ ನಾಲ್ಕು ವರ್ಷದ ಬಾಲಕನ ಬೆನ್ನು ಊದಿಕೊಂಡಿದೆ. ನರ್ಸರಿ ಶಿಕ್ಷಕಿ ಬರೆ ಹಾಕಿದ್ದಾಳೆ. ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಪ್ರಕರಣ ನಡೆದಿದೆ.
Add Asianetnews Kannada as a Preferred Source

ಅಮ್ಮ ಬೇಕು ಎಂದು ಹಠ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ ಎಂದು ಬಾಲಕನ ತಾಯಿ ಕಾವೇರಿ ಆರೋಪ ಮಾಡಿದ್ದಾರೆ. ಆದರೆ ಆರೋಪವನ್ನು ಶಿಕ್ಷಕ ಸತೀಶ್ ನಾಯ್ಡು ಹಾಗೂ ಆಯಾ ಅಲ್ಲಗಳೆದಿದ್ದಾರೆ.
ಬಾಲಕನ ತಾಯಿ ಕಾವೇರಿ ಶಿಕ್ಷಕ ಸತೀಶ್ ಹಾಗೂ ಆಯಾ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
