ಬಾದಾಮಿಯಲ್ಲಿ  ಸುಮಾರು 2 ಲಕ್ಷ ವರ್ಷ ಹಿಂದಿನ ಶಿಲಾಯುಗದ ಆಯುಧಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ನಾಗಪೂರ ಪ್ರಾಗೈತಿಹಾಸಿಕ ಶಾಖೆ ಮುಖ್ಯಸ್ಥ ರಮೇಶ ಮೂಲಿಮನಿ, ತಂಡದವರು ಪತ್ತೆ ಹಚ್ಚಿದ್ದಾರೆ.

ಬಾದಾಮಿ (ಜ.21): ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮ್ಮಿನಾಳ ಹಾಗೂ ಕಾತರಕಿ ಗ್ರಾಮದ ಹತ್ತಿರವಿರುವ ರಂಗನಾಥ ಗುಡ್ಡದ ಪ್ರದೇಶದಲ್ಲಿ ಸುಮಾರು 2 ಲಕ್ಷ ವರ್ಷ ಹಿಂದಿನ ಶಿಲಾಯುಗದ ಆಯುಧಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯದ ನಾಗಪೂರ ಪ್ರಾಗೈತಿಹಾಸಿಕ ಶಾಖೆ ಮುಖ್ಯಸ್ಥ ರಮೇಶ ಮೂಲಿಮನಿ, ತಂಡದವರು ಪತ್ತೆ ಹಚ್ಚಿದ್ದಾರೆ.

Add Asianetnews Kannada as a Preferred SourcegooglePreferred

 ಬೆಟ್ಟದ ಮೇಲ್ಭಾಗದಲ್ಲಿ ಸುಮಾರು ಅರ್ಧ ಕಿಮೀಯಷ್ಟುವಿಸ್ತಾರ ಪ್ರದೇಶದಲ್ಲಿ ಶಿಲಾಯುಗದ ಆಯುಧಗಳು ಹರಡಿವೆ. ಇವುಗಳಲ್ಲಿ ವಿವಿಧ ಮಾದರಿಯ ಕೈಗೊಡಲಿಗಳು, ಬ್ಯೂರಿನ್‌ಗಳು(ಕೆತ್ತನೆ ಉಪಕರಣ), ಕೀವರ್‌ಗಳು, ಹಲಗು ಮತ್ತಿತರ ಕಲ್ಲಿನ ಆಯುಧಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಸುಮಾರು 2 ಲಕ್ಷ ವರ್ಷಗಳ ಹಿಂದೆ ನಮ್ಮ ಪೂರ್ವಜರು ತಮ್ಮ ಆಹಾರಕ್ಕಾಗಿ ಪ್ರಾಣಿಗಳನ್ನು ಬೇಟೆಯಾಡಲು, ಆತ್ಮರಕ್ಷಣೆಗೆ, ಹೋರಾಟಕ್ಕೆ, ಬಳಸುವ ಸಾಧನಗಳಾಗಿದ್ದವು ಎಂದು ತಿಳಿದು ಬಂದಿದೆ.

ಕೊಲ್ಲೂರಿನಲ್ಲಿ ಬೃಹತ್‌ ಶಿಲಾಯುಗದ ನಿವೇಶನ ಪತ್ತೆ .

ಈ ಗುಡ್ಡದ ಪ್ರದೇಶದಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಲ್ಲಿನ ಆಯುಧಗಳು ಪತ್ತೆಯಾಗಿರುವುದು ನೋಡಿದರೆ ಇದು ಆದಿ ಮಾನವನ ಆಯುಧ ತಯಾರಿಸುವ ನೆಲೆಯಾಗಿತ್ತು ಎಂದು ಹೇಳಬಹುದು ಎಂದು ರಮೇಶ ಮೂಲಿಮನಿ ತಿಳಿಸಿದ್ದಾರೆ.