ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ಆನೆ ಮರಿಗೆ ನಾಮಕರಣ ಮಾಡಿದರು.
ಬೆಂಗಳೂರು (ಜ.24): ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಇಂದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದರು.
Add Asianetnews Kannada as a Preferred Source

ಬನ್ನೇರುಘಟ್ಟದ ಜೈವಿಕ ಉದ್ಯಾನವನಕ್ಕೆ ಆಗಮಿಸಿದ ಸ್ವಾಮೀಜಿ ಸಫಾರಿ ಹಾಗೂ ಮೃಗಾಲಯವನ್ನು ವೀಕ್ಷಣೆ ಮಾಡಿದರು.
ಅಪಘಾತದಲ್ಲಿ ಸಾವನ್ನು ಗೆದ್ದ ಮರಿಯಾನೆ, ಪಾರ್ಟಿಯಲ್ಲಿ ಯುವತಿಯ ಕೂದಲಿಗೆ ತಗುಲಿತು ಬೆಂಕಿ! ..
ಬಳಿಕ ಮಾವುತರ ಮಕ್ಕಳೊಂದಿಗೆ ಸಂವಹನ ನಡೆಸಿದ ಸ್ವಾಮೀಜಿ ಅವರಿಹೆ ಹಣ್ಣು ಹಂಪಲುಗಳನ್ನು ವಿತರಿಸಿದರು ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಮೃಗಾಲಯದ ರೂಪ ಆನೆಯ 6 ತಿಂಗಳ ಆನೆ ಮರಿಗೆ ಬಸವ ಎಂದು ಸ್ವಾಮೀಜಿ ನಾಮಕರಣ ಮಾಡಿದರು.
