Asianet Suvarna News Asianet Suvarna News

ಗುದ​ದ್ವಾ​ರ ​ಹೊ​ಕ್ಕಿದ್ದ ಪೊರಕೆ ಪ್ಲಾಸ್ಟಿಕ್‌ ಹಿಡಿ ಹೊರ ತೆಗೆದ ವೈದ್ಯ​ರು!

ದೇಹದೊಳಗೆ ಸೂಕ್ಷ್ಮ ವಸ್ತುಗಳು ಹೋಗುವುದು ಸಾಮಾನ್ಯ. ಆದರೆ ಪೊರಕೆಯೊಂದು ವ್ಯಕ್ತಿಯೊಬ್ಬರ ಗುದದ್ವಾರದ ಒಳಗೆ ಹೋಗಿ ಶಸ್ತ್ರಚಿಕಿತ್ಸೆ ನಡೆದಿರುವ ಘಟನೆ ರಾಮನಗರದಲ್ಲಿ ನಡೆದಿದೆ. 

Ramnagar Doctors Succeeds To Remove Broom From Mans Rectum
Author
Bengaluru, First Published Nov 25, 2019, 9:02 AM IST

ರಾಮನಗರ (ನ. 25): ವ್ಯಕ್ತಿಯೊಬ್ಬರ ಗುದದ್ವಾರದ ಮೂಲಕ ಒಳ ಹೋಗಿದ್ದ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ನಗ​ರದ ಮಹಬೂಬ್‌ ನಗರ ಬಡಾ​ವಣೆ ವಾಸಿ ಇರ್ಫಾನ್‌ ಷರೀಫ್‌ (26) ಅವರಿಗೆ ಗುದದ್ವಾರದ ಮೂಲಕ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಯಾರೊ ಮೂರು ದಿನಗಳ ಹಿಂದೆ ಹಾಕಿದ್ದರು. ಇದರಿಂದ ಕರುಳಿನ ಭಾಗಕ್ಕೆ ತುಂಬಾ ತೊಂದರೆಯಾಗುತ್ತಿತ್ತು.

ಅಯೋಧ್ಯೆ ಗೋಶಾಲೆಗಳ ಹಸುಗಳಿಗೆ ಚಳಿ ತಡೆಯಲು ವಿಶೇಷ ಸೆಣಬಿನ ಕೋಟ್‌!

ಡಾ.ಎಸ್‌.ವಿ. ​ನಾ​ರಾ​ಯ​ಣ​ಸ್ವಾಮಿ ಅವ​ರು ಇರ್ಫಾನ್‌ ಷರೀಫ್‌ ಅವ​ರನ್ನು ತಪಾ​ಸಣೆಗೆ ಒಳ​ಪ​ಡಿ​ಸಿ​ದಾಗ ಗುದ​ದ್ವಾ​ರದ ಮೂಲಕ ಬಾಟಲ್‌ ಅನ್ನು ಹಾಕಿ​ರ​ಬೇ​ಕೆಂದು ಭಾವಿ​ಸಿ​ದ್ದರು. ಶಸ್ತ್ರ ಚಿಕಿ​ತ್ಸೆಗೂ ಮುನ್ನ ಹಿರಿಯ ವೈದ್ಯ​ರೊಂದಿಗೆ ಚರ್ಚೆ ನಡೆಸಿ ಸಲಹೆ ಪಡೆ​ದು​ಕೊಂಡಿ​ದ್ದ​ರು.

ಆಸ್ಪ​ತ್ರೆ​ಯಲ್ಲಿ ಭಾನುವಾರ ಒಂದೂ​ವರೆ ಗಂಟೆ​ಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ಡಾ.ಎಸ್‌.ವಿ. ನಾರಾಯಣಸ್ವಾಮಿ ಅವರು ಗುದದ್ವಾರದ ಮೂಲಕ ಹೊಟ್ಟೆಯ ಭಾಗ​ಕ್ಕೆ ತಲು​ಪಿದ್ದ 24 ಸೆ.ಮೀ ಉದ್ದದ ಪೊರಕೆಯ ಪ್ಲಾಸ್ಟಿಕ್‌ ಹಿಡಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಅರವಳಿಕೆ ತಜ್ಞ ಡಾ. ಸಂಪಂಗಿ ರಾಮಯ್ಯ, ಶುಶ್ರೂಷಕರಾದ ಸಂಧ್ಯಾ, ದಿಲೀಪ್‌, ನಾರಾಯಣ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಎನ್‌. ಮಧುಸೂದನ್‌ ಇದ್ದರು.

Follow Us:
Download App:
  • android
  • ios