Asianet Suvarna News Asianet Suvarna News

Ramanagar : ಜಿಲ್ಲೆ​ಯಲ್ಲಿ 12,526 ರೈತರ ಮಕ್ಕ​ಳಿಗೆ ವಿದ್ಯಾ​ನಿಧಿ

ರಾಜ್ಯ ಸರ್ಕಾ​ರದ ಮಹ​ತ್ವ​ಕಾಂಕ್ಷಿ ‘ಮುಖ್ಯ​ಮಂತ್ರಿ ರೈತ ವಿದ್ಯಾ​ನಿಧಿ ಯೋಜ​ನೆ’ಯಲ್ಲಿ 2021-22ನೇ ಸಾಲಿ​ನಲ್ಲಿ ಜಿಲ್ಲೆ​ಯಲ್ಲಿ ಈವ​ರೆಗೆ 12,526 ವಿದ್ಯಾ​ರ್ಥಿ​ಗ​ಳ ಖಾತೆಗೆ 4.98 ಕೋಟಿ ಶಿಷ್ಯ ವೇತನ ಜಮೆ ಮಾಡ​ಲಾ​ಗಿದೆ.

Ramanagara  Vidyanidhi for the children of 12 526 farmers in the district  snr
Author
First Published Dec 9, 2022, 6:25 AM IST

 -ಎಂ.ಅ​ಫ್ರೋಜ್‌ ಖಾನ್‌

  ರಾಮ​ನ​ಗರ (ಡಿ.09):  ರಾಜ್ಯ ಸರ್ಕಾ​ರದ ಮಹ​ತ್ವ​ಕಾಂಕ್ಷಿ ‘ಮುಖ್ಯ​ಮಂತ್ರಿ ರೈತ ವಿದ್ಯಾ​ನಿಧಿ ಯೋಜ​ನೆ’ಯಲ್ಲಿ 2021-22ನೇ ಸಾಲಿ​ನಲ್ಲಿ ಜಿಲ್ಲೆ​ಯಲ್ಲಿ ಈವ​ರೆಗೆ 12,526 ವಿದ್ಯಾ​ರ್ಥಿ​ಗ​ಳ ಖಾತೆಗೆ 4.98 ಕೋಟಿ ಶಿಷ್ಯ ವೇತನ ಜಮೆ ಮಾಡ​ಲಾ​ಗಿದೆ.

ರೈತರ (Farmers)   ಮಕ್ಕ​ಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣ (Education)  ಪ್ರೋತ್ಸಾ​ಹಿ​ಸಲು ಆರ್ಥಿ​ಕ​ವಾಗಿ ನೆರ​ವಾ​ಗುವ ಉದ್ದೇ​ಶ​ದಿಂದ ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ ಅವರು ಇತ್ತೀ​ಚೆಗೆ ಹೊಸ ಶಿಷ್ಯ ವೇತನ ಮುಖ್ಯ​ಮಂತ್ರಿ ರೈತ ವಿದ್ಯಾ​ನಿಧಿ ಯೋಜ​ನೆ​ಯನ್ನು ಅನು​ಷ್ಠಾ​ನ​ಗೊ​ಳಿ​ಸಿ​ದ್ದರು.

ಜಿಲ್ಲೆ​ಯಲ್ಲಿ ಯೋಜ​ನೆಗೆ ಉತ್ತಮ ಪ್ರತಿ​ಕ್ರಿಯೆ ವ್ಯಕ್ತ​ವಾ​ಗಿದ್ದು, ವಿದ್ಯಾ​ರ್ಥಿ​ಗಳು ಶಿಷ್ಯ ವೇತನ ಕೋರಿ ಆನ್‌ ಲೈನ್‌ ನಲ್ಲಿ ನಿಗ​ದಿತ ತಂತ್ರಾಂಶದಲ್ಲಿ ಅರ್ಜಿ ಸಲ್ಲಿ​ಸು​ತ್ತಿ​ದ್ದಾರೆ. ಈವರೆಗೆ ಮೊದ​ಲನೇ ಹಂತ​ದಲ್ಲಿ 12,526 ವಿದ್ಯಾ​ರ್ತಿ​ಗ​ಳಿಗೆ 4,98,28,000 ರುಪಾ​ಯಿ ಶಿಷ್ಯ ವೇತ​ನ​ವನ್ನು ವಿದ್ಯಾ​ರ್ಥಿ​ಗ​ಳಿಗೆ ಕಲ್ಪಿ​ಸ​ಲಾ​ಗಿದೆ.

ಫಲಾ​ನು​ಭ​ವಿ​ಗಳ ಬ್ಯಾಂಕ್‌ ಖಾತೆಗೆ ನೇರ​ವಾಗಿ ಹಣ ಜಮೆ​ಯಾ​ಗಿದೆ. ದ್ವಿತೀಯ ಪಿಯುಸಿಗೆ ದಾಖ​ಲಾ​ಗು​ತ್ತಿ​ದ್ದಂತೆಯೇ ಕಾಲೇ​ಜು​ಗ​ಳಲ್ಲಿ ನೀಡುವ ದತ್ತಾಂಶದ ಆಧಾರದ ಮೇಲೆ ಅವ​ರ​ವರ ಬ್ಯಾಂಕ್‌ ಖಾತೆಗೆ ಹಣ ವರ್ಗಾ​ಯಿ​ಸ​ಲಾ​ಗಿದೆ. ವಿದ್ಯಾ​ರ್ಥಿ​ಗ​ಳಿಗೆ ತಲಾ 2,500 ಮತ್ತು ವಿದ್ಯಾ​ರ್ಥಿ​ನಿ​ಯ​ರಿಗೆ 3,000 ರುಪಾಯಿ ನೀಡ​ಲಾ​ಗಿದೆ.

ಈ ಯೋಜ​ನೆಯು ಮುಂದು​ವ​ರೆ​ದಿದ್ದು, ಆನ್‌ ಲೈನ್‌ ನಲ್ಲಿ ನೋಂದಣಿ ಮಾಡಿ​ಕೊ​ಳ್ಳ​ಬ​ಹು​ದಾ​ಗಿದೆ. ವಿದ್ಯಾ​ರ್ಥಿಯ ತಂದೆ - ತಾಯಿಗೆ ಜಮೀನು ಇದಿಯೋ ಇಲ್ಲವೋ ಎನ್ನು​ವು​ದನ್ನು ಖಚಿ​ತ​ಪ​ಡಿ​ಸಿ​ಕೊಂಡು ನೆರವು ಕಲ್ಪಿ​ಸ​ಲಾ​ಗು​ತ್ತಿದೆ. ಜೊತೆಗೆ ಪುನ​ರಾ​ವ​ರ್ತಿತ ವಿದ್ಯಾ​ರ್ಥಿ​ಗಳು ಅರ್ಹರಾ​ಗಿ​ರು​ವು​ದಿಲ್ಲ ಎನ್ನು​ತ್ತಾರೆ ಕೃಷಿ ಇಲಾಖೆ ಅಧಿ​ಕಾ​ರಿ​ಗ​ಳು.

ರೈತರ ಮಕ್ಕಳ ಉನ್ನತ ಶಿಕ್ಷಣ ಪ್ರೋತ್ಸಾ​ಹಿ​ಸುವ ಯೋಜನೆ ಇದಾ​ಗಿದೆ. ಮೆಟ್ರಿಕ್‌ ನಂತ​ರದ ಹೆಚ್ಚಿನ ಶಿಕ್ಷ​ಣ​ಕ್ಕಾಗಿ ರಾಜ್ಯ​ದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆ ಅಥವಾ ವಿಶ್ವ ವಿದ್ಯಾ​ಲ​ಯ​ಗ​ಳಲ್ಲಿ ಪ್ರವೇಶ ಪಡೆ​ಯುವ ರೈತರ ಮಕ್ಕ​ಳಿಗೆ ಅವರ ಕೋರ್ಸ್‌ಗಳಿಗೆ ಅನು​ಗು​ಣ​ವಾಗಿ 2500 ರಿಂದ 11 ಸಾವಿರ ರು.ವ​ರೆಗೆ ಶಿಷ್ಯ ವೇತನ ಕೊಡ​ಲಾ​ಗು​ವುದು.

ಇತರ ವಿದ್ಯಾರ್ಥಿ ವೇತ​ನ​ಗ​ಳನ್ನು ಪಡೆ​ದ​ವರು ಕೂಡ ರೈತ ವಿದ್ಯಾ​ನಿಧಿ ಶಿಷ್ಯ ವೇತ​ನಕ್ಕೆ ಅರ್ಹ​ರಾ​ಗಿ​ರು​ತ್ತಾರೆ. ವಿದ್ಯಾ​ರ್ಥಿಯ ತಂದೆ ಅಥವಾ ತಾಯಿ ರೈತರ ಗುರು​ತಿನ ಸಂಖ್ಯೆ (ಎಫ್‌ ಐಡಿ) ಹೊಂದಿ​ರ​ಬೇ​ಕಾ​ಗು​ತ್ತದೆ. ಈ ಬಗ್ಗೆಯೂ ಜಾಗೃತಿ ಮೂಡಿ​ಸ​ಲಾ​ಗು​ತ್ತಿದೆ.

ಈ ಶಿಷ್ಯ ವೇತನ ಯೋಜ​ನೆ​ಯನ್ನು 8ರಿಂದ 10ನೇ ತರ​ಗತಿ ವ್ಯಾಸಂಗ ಮಾಡು​ತ್ತಿ​ರುವ ರೈತ ಕುಟುಂಬದ ಬಾಲ​ಕಿ​ಯ​ರಿಗೂ ವಿಸ್ತ​ರಿಸಿ ಸರ್ಕಾ​ರ​ದಿಂದ ಆದೇಶ ಹೊರ​ಡಿ​ಸ​ಲಾ​ಗಿದೆ. ಅದ​ರಂತೆ ಪ್ರತಿ ವಿದ್ಯಾರ್ಥಿನಿಗೆ 2 ಸಾವಿರ ಶಿಷ್ಯ ವೇತನ ದೊರೆ​ಯ​ಲಿದೆ. ಈ ಮೂಲಕ ಹೆಣ್ಣು ಮಕ್ಕಳ ಶಿಕ್ಷ​ಣಕ್ಕೂ ಪ್ರೋತ್ಸಾಹ ಕೊಡ​ಲಾ​ಗು​ತ್ತಿದೆ.

ಬಾಕ್ಸ್‌ ....

ಯಾರಿಗೆ ಎಷ್ಟುಶಿಷ್ಯ ವೇತನ ?

*ಪ್ರೌಢಶಿಕ್ಷಣ (8ರಿಂದ 10ನೇ ತರ​ಗ​ತಿ​): ಹೆಣ್ಣು ಮಕ್ಕ​ಳಿಗೆ ಮಾತ್ರ 2,000

*ಪಿಯುಸಿ, ಐಟಿಐ, ಡಿಪ್ಲೊಮಾ: ವಿದ್ಯಾ​ರ್ಥಿ​ಗ​ಳಿಗೆ 2,500 ಹಾಗೂ ವಿದ್ಯಾ​ರ್ಥಿ​ನಿ​ಯ​ರಿಗೆ(ತೃ​ತೀಯ ಲಿಂಗಿ​ಗಳು ಸೇರಿ) 3,000

*ಬಿಎ, ಬಿಎಸ್ಸಿ, ಬಿ.ಕಾಂ ಸೇರಿ ಎಲ್ಲಾ ಪದವಿ: ವಿದ್ಯಾ​ರ್ಥಿ​ಗ​ಳಿಗೆ 5 ಸಾವಿರ, ವಿದ್ಯಾ​ರ್ಥಿ​ನಿ​ಯ​ರಿಗೆ 5,500

*ಎಲ್‌ಎಲ್‌ಬಿ, ಪ್ಯಾರಾ ಮೆಡಿ​ಕಲ್‌, ಬಿ.ಫಾರ್ಮ, ನರ್ಸಿಂಗ್‌ ಮೊದ​ಲಾದ ವೃತ್ತಿ​ಪರ ಕೋರ್ಸ್‌: ವಿದ್ಯಾ​ರ್ಥಿ​ಗ​ಳಿಗೆ 7,500, ವಿದ್ಯಾ​ರ್ಥಿ​ನಿ​ಯ​ರಿಗೆ 8,000

*ಎಂಬಿ​ಬಿ​ಎಸ್‌, ಬಿಇ, ಬಿ.ಟೆಕ್‌ ಹಾಗೂ ಸ್ನಾತ​ಕೋ​ತ್ತರ ಕೋರ್ಸ್‌: ವಿದಾ​ರ್ಥಿ​ಗ​ಳಿಗೆ 10 ಸಾವಿರ, ವಿದ್ಯಾ​ರ್ಥಿ​ನಿ​ಯ​ರಿಗೆ 11 ಸಾವಿರ

ಮುಖ್ಯ​ಮಂತ್ರಿ ರೈತ ವಿದ್ಯಾ ನಿಧಿ ಯೋಜ​ನೆ​ಯಿಂದ ವಿದ್ಯಾ​ರ್ಥಿ​ಗ​ಳಿಗೆ ಅನು​ಕೂ​ಲ​ವಾಗಲಿದೆ. ಈಗಾ​ಗಲೇ ಹೆಸರು ನೊಂದಾ​ಯಿತ ರೈ​ತರ ಮಕ್ಕ​ಳಿಗೆ ಶಿಷ್ಯ ವೇತನವನ್ನು ಅವರ ಖಾತೆ​ಗ​ಳಿಗೆ ನೇರ ನಗದು ವರ್ಗಾ​ವಣೆ ಪದ್ಧ​ತಿಯ ಮೂಲಕ ಜಮಾ ಮಾಡ​ಲಾ​ಗಿದೆ. ವಿದ್ಯಾ​ರ್ಥಿ​ಗಳು ಹೆಸರು ನೋಂದಾ​ಯಿ​ಸಿ​ಕೊ​ಳ್ಳುವ ಪ್ರಕ್ರಿಯೆ ಮುಂದು​ವ​ರೆ​ದಿ​ದೆ.

-ಸೋಮ​ಸುಂದರ್‌, ಜಂಟಿ ಕೃಷಿ ನಿರ್ದೇ​ಶ​ಕರು, ರಾಮನ​ಗರ

(ನಿ​ಧಿಯ ಪ್ರಗತಿ ಮಾಹಿತಿ)

ತಾಲೂಕು ವಿದ್ಯಾ​ರ್ಥಿ​ಗಳ ಸಂಖ್ಯೆ ಜಮಾ​ವಾದ ಮೊತ್ತ

ಕನ​ಕ​ಪುರ 2,993 1,02,96,500

ಮಾಗಡಿ 2,323 75,26,500

ಚನ್ನ​ಪ​ಟ್ಟಣ 3226 1,12,51,500

ರಾಮ​ನ​ಗರ 3,984 2,06,33,500

ಒಟ್ಟು 12,526 4,98,28,000

Follow Us:
Download App:
  • android
  • ios